

Bigg Boss ಸೀಸನ್ ಕನ್ನಡ 12 ಮುಗಿದು ಸುಮಾರು ಒಂದು ತಿಂಗಳು ಕಳೆದಿದೆ. ಆದರೆ ಇದೀಗ ಬಿಗ್ ಬಾಸ್ ಮುಗಿದರು ಕೂಡ ಕೆಲವು ಸ್ಪರ್ಧಿಗಳ ಬೀದಿರಂಪಾಟ ಇನ್ನು ಮುಗಿದಿಲ್ಲ. ಬಿಗ್ ಬಾಸ್ ಮನೆಯೊಳಗಿದ್ದಾಗಲೂ ಜಗಳವಾಡಿಕೊಂಡಿದ್ದ ಕೆಲವು ಸ್ಪರ್ಧಿಗಳು ಇದೀಗ ಹೊರ ಬಂದಾಗಲೂ ಕೂಡ ಅದನ್ನು ಮುಂದುವರಿಸಿಕೊಂಡು ಕಮೆಂಟ್ ವಾರ್ ನಡೆಸುತ್ತಿದ್ದಾರೆ.
ಹೌದು, ಬಿಗ್ ಬಾಸ್ ಸ್ಪರ್ಧಿಗಳಾದ ಅಶ್ವಿನಿ ಗೌಡ ಚೈತ್ರ ಕುಂದಾಪುರ ಮತ್ತು ಜಾನವಿ ಅವರ ನಡುವೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ವಾರ್ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅಶ್ವಿನಿ ಗೌಡ ಅವರ ಬೆಂಬಲಿಗರು, ಫ್ಯಾನ್ಸ್ ಹಾಗೂ ಚೈತ್ರಾ ಕುಂದಾಪುರ ನಡುವೆ ಜೋರು ಕಾಮೆಂಟ್ ಸಮರ ನಡೆಯುತ್ತಿದೆ. ಪರಸ್ಪರ ಟಾಂಗ್ ಕೊಡುತ್ತಿದ್ದಾರೆ. ಅಶ್ವಿನಿ ಗೌಡ ಅವರ ಪರ ಸಹ ಸ್ಪರ್ಧಿಯಾಗಿದ್ದ ಜಾಹ್ನವಿ ಅವರು ಬ್ಯಾಟ್ ಬೀಸಿದ್ದಾರೆ.
ಜಗಳ ಶುರುವಾಗಿದ್ದು ಯಾಕೆ?
ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಚೈತ್ರಾ ಕುಂದಾಪುರ ಆಟ ಆಡುವಾಗ ಅವರ ಮೈಮೇಲೆ ಗಾಯಗಳು ಆಗಿತ್ತು. ಅಶ್ವಿನಿ ಗೌಡ ಕೈಮೇಲೆ ಪರಚಿದ ಗಾಯಗಳ ಗುರುತು ಇತ್ತು. ಈ ಫೋಟೋಗಳು ಈಗ ವೈರಲ್ ಆಗುತ್ತಿದ್ದವು. ಈ ಬಗ್ಗೆ ಚೈತ್ರಾ ಕುಂದಾಪುರ ಅವು ಪ್ರತಿಕ್ರಿಯೆ ಕೊಟ್ಟಿದ್ದು, “ಇದು ಪಿಆರ್ ತಂತ್ರ, ನಾನು ಪಿಆರ್ ಮಾಡಿಲ್ಲ” ಎಂದು ಹೇಳಿದ್ದರು.
ಅಂದಹಾಗೆ ಅಶ್ವಿನಿ ಗೌಡ ಅವರ ಅಭಿಮಾನಿಗಳು, “ಅದು ಪಿ ಆರ್ ಅಲ್ಲ, ಗೌರವ, ಪಿ ಆರ್ ತಂತ್ರದಿಂದ ಗೌರವ ಬರೋದಿಲ್ಲ” ಎಂದು ಪೋಸ್ಟ್ ಹಂಚಿಕೊಳ್ಳುತ್ತಿದ್ದರು. ಆಮೇಲೆ ಅಶ್ವಿನಿ ಗೌಡ ಕೂಡ ಇದನ್ನೆಲ್ಲ ಶೇರ್ ಮಾಡಿದ್ದರು. ಬಳಿಕ ಪಕ್ಕಾ ಸರ್ಕಾರಿ ಶಾಲೆ, ಕನ್ನಡ ಮೀಡಿಯಂ ಮಕ್ಕಳು ನಾವು, ಇದನ್ನೆಲ್ಲ ನಮ್ಮ ಹತ್ರ ಇಟ್ಕೊಬೇಡಿ, ಇಂತಹ ಗಿಮಿಕ್ ಎಲ್ಲವನ್ನು ಕನ್ನಡ ಓದೋಕೆ ಬರೆಯೋಕೆ ಬರದೆ ಇರೋ ಇಂಗ್ಲಿಷ್ ಮಕ್ಕಳ ಹತ್ರ ಇಟ್ಕೋಳಿ ಎಂದು ಚೈತ್ರಾ ಕುಂದಾಪುರ ಪೋಸ್ಟ್ ಮಾಡಿದ್ದರು.
ಚೈತ್ರಾ ಹೇಳಿದ್ದೇನು?
“ವೈಯಕ್ತಿಕ ದಾಳಿಗೆ ಇಳಿಯೋದೆ ಆದರೆ ನಾನು ಇಳಿಯಬಲ್ಲೆ. ಆದರೆ ನನಗೂ ನಿಮಗೂ ವ್ಯತ್ಯಾಸ ಇದೆ. ನನಗೂ ಗೊತ್ತು, ಯಾರು ಮೇಲೆ ಎಷ್ಟು ಚೆಕ್ಬೌನ್ಸ್ ಕೇಸ್ಇದೆ, ಯಾರಿಗೆ ಎಷ್ಟು ಗಂಡಂದಿರು ಇದ್ದಾರೆ? ಯಾಕೆ ತನ್ನ ಪ್ರೀತಿಯ ಬಗ್ಗೆ ಎರಡು ನಿಮಿಷ ಮಾತನಾಡುವ ಧೈರ್ಯ ಕೂಡ ಬಗ್ ಬಾಸ್ ಮನೆಯ ಒಳಗಡೆ ತೋರಿಸಲಿಲ್ಲ. ಎಲ್ಲವನ್ನು ಮಾತನಾಡಬಲ್ಲೆ, ಆದರೆ ನಾನು ಇವರಷ್ಟು ಚೀಪ್ಅಲ್ಲ, ನನಗೆ ಇನ್ನೊಬ್ಬತ ಮೇಲೆ ವೈಯಕ್ತಿಕ ದಾಳಿ ಮಾಡಿ ಪ್ರಚಾರ ಪಡೆಯುವ ಹುಚ್ಚು ಇಲ್ಲ. ಅಂದಹಾಗೆ ಚೆಕ್ ಬೌನ್ಸ್ಕೇಸ್ ಕೂಡ ವಂಚನೆ ಕೇಸ್ ಅಡಿಯಲ್ಲೇ ಬರುತ್ತದೆ. ಮೂರು ಗಂಡಂದಿರು.. ಕ್ಷಮಿಸಿ ಈಗ ಹೆಗಲು ಮುಟ್ಟಿ ನೋಡಿಕೊಳ್ಳಬೇಕು” ಎಂದು ಚೈತ್ರಾ ಕುಂದಾಪುರ ಅವರು ಪೋಸ್ಟ್ ಹಾಕಿದ್ದಾರೆ. ಚೈತ್ರಾ ಕುಂದಾಪುರ ಅವರು ಯಾವ ಬಿಗ್ ಬಾಸ್ ಸ್ಪರ್ಧಿಗೆ ಹೇಳಿದ್ದಾರೆ ಎಂಬುದನ್ನು ಅವರೇ ಹೇಳಬೇಕಿದೆ.
ಜಾಹ್ನವಿ-ಚೈತ್ರಾ ಕುಂದಾಪುರ ವಾರ್
ಈ ಪೋಸ್ಟ್ಗೆ ಜಾಹ್ನವಿ ಅವರು ಕಾಮೆಂಟ್ ಮಾಡಿದ್ದು, “ಚಿಟಾರ್ ಎಂದು ಕಿರುಚುವ ಮನುಷ್ಯ ಪ್ರಾಣಿ..” ಎಂದು ಹೇಳಿದ್ದಾರೆ. ಚೈತ್ರಾ ಕುಂದಾಪುರ ಅವರು ಈ ಕಾಮೆಂಟ್ಗೆ ಪ್ರತಿ ಕಾಮೆಂಟ್ ಮಾಡಿದ್ದಾರೆ. ಅದು ಕಾಮೆಂಟ್ ಬಾಕ್ಸ್ನಲ್ಲಿ ಇಲ್ಲ.
ಮತ್ತೆ ಜಾಹ್ನವಿ ಅವರು ಹೀಗೆ ಕಾಮೆಂಟ್ ಮಾಡಿದ್ದಾರೆ – “ನನ್ನ ಕಾಮೆಂಟ್ಗೆ ನೀವ್ಯಾಕೆ ರಿಪ್ಲೈ ಮಾಡಿದ್ದೀರಾ? ನಿಮಗೆ ಚಿಟಾರ್ ಎಂದು ಕಿರುಚುವ ಮನುಷ್ಯ ಪ್ರಾಣಿ ಗೊತ್ತಾ?”
ಚೈತ್ರಾ – “ಖಂಡಿತ ಗೊತ್ತು.. ನನಗೆ ಎಲ್ಲಾ ತರಹದ ಪ್ರಾಣಿಗಳ ಬಗ್ಗೆಯೂ ಗೊತ್ತು..ನಾನೊಬ್ಬ ಪತ್ರಕರ್ತೆ. ನನಗೆ ಈ ಸಮಾಜದ ಎಲ್ಲಾ ಪ್ರಾಣಿಗಳ ಬಗ್ಗೆ ಸುದ್ದಿ ಮಾಡಿ ಗೊತ್ತು. ಮತ್ತೆ ಮುಂದುವರೆದು ಸಮಾಜದ ಎಲ್ಲಾ ಮನಸ್ಥಿತಿಯ ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳದಿದ್ದರೆ ಅವರು ಪತ್ರಕರ್ತರಾಗಿರಲು ಅರ್ಹರಲ್ಲ”
ಜಾಹ್ನವಿ – “ಹಾಗಾದರೆ ತಿಳಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಲ್ಲ”
ಚೈತ್ರಾ – “ಕೆಲವರು ಶಿಕ್ಷೆ ಅನುಭವಿಸ್ತಾ ಇರೋದು ನಾವು ನೋಡ್ತಾ ಇದ್ದೇವೆ”
ಜಾಹ್ನವಿ – “ಹೌದಾ? ಆಟವನ್ನು ಆಟದ ಹಾಗೆ ಹೇಗೆ ನೋಡಬೇಕೋ, ಆಟವನ್ನು ಆಟದ ಹಾಗೆ ಆಡಬೇಕು.. ನೀವ್ಯಾಕೆ ತಲೆ ಕೆಡಿಸಿಕೊಳ್ಳುತ್ತೀರಾ?”
ಚೈತ್ರಾ – “ದೇವರ ಲೆಕ್ಕಾ ಪಕ್ಕಾ ಇರುತ್ತದೆ. ಮನಷ್ಯರು ನಾವು ಕೆಲವೊಮ್ಮೆ ತಪ್ಪು ತಿಳಿದುಕೊಂಡು ಎಲ್ಲರನ್ನೂ ಒಳ್ಳೆಯವರು ಅಂದುಕೊಂಡಿರುತ್ತೇವೆ. ಆದರೆ ದೇವರಿಗೆ ಎಲ್ಲರ ಅರ್ಹತೆ ಗೊತ್ತಿರುತ್ತೆ. ಹಾಗಾಗಿ ಯಾರಿಗೆ ಏನು ಕೊಡಬೇಕೋ ಅಷ್ಟು ಮಾತ್ರ ಕೊಡ್ತಾನೆ”
ಜಾಹ್ನವಿ – “ಕಾಲವೇ ಉತ್ತರ ಕೊಡುತ್ತದೆ ಬಿಡಿ”
ಚೈತ್ರಾ – “ಕಾಲ ಉತ್ತರ ಕೊಟ್ಟಿದೆ.. ಅದನ್ನು ನಾವು ಅರ್ಥ ಮಾಡಿಕೊಂಡಿರಲಿಲ್ಲ ಅಷ್ಟೇ.. ಅಹಂಕಾರಕ್ಕೆ ಉದಾಸೀನವೇ ಮದ್ದು.”
ಜಾಹ್ನವಿ – “ಏನ್ ಉತ್ತರ ಕೊಟ್ಟಿದೆ? ಅದೆಲ್ಲ ಸರಿ ಕುಂಬಳಕಾಯಿ ಕಳ್ಳ ಅಂದರೆ ನೀವ್ಯಾಕೆ ಹೆಗಲು ಮುಟ್ಟಿ ನೋಡಿಕೊಳ್ತಾ ಇದೀರಾ?”
ಚೈತ್ರಾ – “ಇದೆಲ್ಲ ಹಳೆ ಗಾದೆ… ನೇರವಾಗಿ ಹೇಳೋ ತಾಕತ್ತು ಇರಬೇಕು.. ಅದು ನನಗಿದೆ.. ನಾನು ಎದುರಿಂದ ಚೆನ್ನಾಗಿ ಮಾತಾಡಿ ಹಿಂದೆ ಇಂದ ಬಂದು ಅಸೂಯೆಯಲ್ಲಿ ಕಾಮೆಂಟ್ ಹಾಕಲ್ಲ. ಬಿಗ್ ಬಾಸ್ ನೋಡಿರೋ ಎಲ್ಲರಿಗೂ ಗೊತ್ತು ನನ್ನ ಮೈ ಮೇಲೆ ಇರುವ ಉಗುರಿನ ಕಲೆ ಯಾರದ್ದು, ಅವರ ಮೈಮೇಲಿನ ಉಗುರಿನ ಕಲೆ ಯಾರದ್ದು ಅಂತಾ..ಅದನ್ನ ನೇರವಾಗಿ ಮಾತನಾಡಿ ಅಲ್ಲಿಗೆ ಬಿಟ್ಟು ಮುಂದೆ ಹೋಗುವ ಮೆಚ್ಯುರಿಟಿ ಮತ್ತು ಧೈರ್ಯ ಎರಡೂ ನನಗಿದೆ.. ಆದ್ರೆ ಎದುರುಗಡೆ ಚೆನ್ನಾಗಿ ಮಾತಾಡಿ ಹಿಂದೆ ಇಂದ ಹೀಗೆ ಕಾಮೆಂಟ್ ಹಾಕೋ ನಿಮ್ಮಗಳ ಮನಸ್ಥಿತಿ ಎಷ್ಟು ಸಣ್ಣದು ಅಂತಾ ಈ ಘಟನೆ ಇಂದ ಗೊತ್ತಾಯ್ತು. ನಾನು ಹೇಡಿ ಅಲ್ಲ… ನಾನು ಏನು ಹೇಳ್ತೀನೋ ಅದನ್ನ ನೇರವಾಗಿ ಹೇಳ್ತೀನಿ. ಮತ್ತು ಅದನ್ನ ಒಪ್ಕೋತೀನಿ. ಹೇಳುವಾಗ ಬೇರೆ ಅರ್ಥದಲ್ಲಿ ಹೇಳಿ ಆಮೇಲೆ ಬೇರೆ ಅರ್ಥ ಕೊಡುವ ಸಣ್ಣ ಮನಸ್ಥಿತಿ ನನಗಿಲ್ಲ”
ಮತ್ತೆ ಚೈತ್ರಾ – ನನ್ನ ಮೈ ಮೇಲೆ ಕೂಡ ಉಗುರಿನ ಕಲೆಗಳಿವೆ. ನನಗಿಂತ ಡಬಲ್ ತೂಕ ಇರುವ ವ್ಯಕ್ತಿ, ನಾನು ಪೀರಿಯಡ್ಸ್ನಲ್ಲಿದ್ದಾಗ ನನ್ನ ಕಿಬ್ಬೊಟ್ಟೆ ಮೇಲೆ ಕುಳಿತು ಕುತ್ತಿಗೆ ಟ್ವಿಸ್ಟ್ ಮಾಡಿದ್ದಾರೆ. ಆ ನೋವು ಟಿಂಕ್ಚರ್ (tincture) ಹಚ್ಚಿದರು ಹೋಗಲ್ಲ. ಆದರೆ ಕ್ಷಮಿಸಿ – ಇದನೆಲ್ಲಾ ತೋರಿಸಿ ಸಿಂಪತಿ ಪಡೆಯೋಕೆ, ನನ್ನ ಹತ್ತಿರ ದೊಡ್ಡು ಕೊಟ್ಟು ಇಟ್ಕೊಂಡಿರುವ ಪಿಆರ್ (PR) ತಂಡ ಇಲ್ಲ” ಎಂದು ಉತ್ತರ ಕೊಟ್ಟಿದ್ದಾರೆ.













