Home » ಬೆಳ್ತಂಗಡಿ: ಚಿನ್ನ ಪಾಲಿಶ್‌ ಮಾಡುವ ನೆಪದಲ್ಲಿ ವಂಚನೆ ಪ್ರಕರಣ: ಆರೋಪಿಯ ಬಂಧನ

ಬೆಳ್ತಂಗಡಿ: ಚಿನ್ನ ಪಾಲಿಶ್‌ ಮಾಡುವ ನೆಪದಲ್ಲಿ ವಂಚನೆ ಪ್ರಕರಣ: ಆರೋಪಿಯ ಬಂಧನ

0 comments

ಬೆಳ್ತಂಗಡಿ: ಚಿನ್ನವನ್ನು ಪಾಲಿಶ್‌ ಮಾಡಿಕೊಡುವ ನೆಪದಲ್ಲಿ ಅಪರಿಚಿತ ವ್ಯಕ್ತಿಯೋರ್ವ ಮನೆಗೆ ಬಂದು ಚಿನ್ನವನ್ನು ಪಡೆದಿದ್ದು, ನಂತರ ಅದಕ್ಕೆ ರಾಸಾಯನಿಕವನ್ನು ಬಲಸಿ ಕರಗಿಸಿ ತೆಗೆದುಕೊಂಡು ಹೋಗಿರುವ ಘಟನೆ ಸಂಬಂಧಪಟ್ಟಂತೆ ವೇಣೂರು ಪೊಲೀಸರು ಆರೊಪಿಯನ್ನು ಇದೀಗ ಬಂಧನ ಮಾಡಿದ್ದಾರೆ. ಆರೋಪಿಯನ್ನು ಬರೋಬ್ಬರಿ 18 ದಿನಗಳ ಬಳಿಕ ಬಂಧನ ಮಾಡಲಾಗಿದೆ.

ಬಿಹಾರ ರಾಜ್ಯದ ಸುಫೋಲ್‌ ಜಿಲ್ಲೆಯ ತ್ರಿವೇಣೆಗಂಝ್‌ ತಾಲೂಕಿನ ರಘುನಾಥಪುರ ಗ್ರಾಮದ ವಾರ್ಡ್‌ ನಂಬರ್‌ 5 ರ ನಿವಾಸಿ ಸೂರಜ್‌ ದೇವ್‌ ಮಂಡಲ್ ಅವರ ಮಗ ಚಂದನ್‌ ಕುಮಾರ್‌ (30) ಎಂಬಾತನೇ ಆರೋಪಿ.

ಫೆ.10ರಂದು ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಮಹಿಳೆಯೊಬ್ಬರ ಮನೆಗೆ ಆರೋಪಿಯು ಸೇಲ್ಸ್‌ ಮ್ಯಾನ್‌ ಎಂದು ಹೇಳಿಕೊಂಡು ಬಂದಿದ್ದು, ಚಿನ್ನದ ಒಡವೆಗಳನ್ನು ತೊಳೆದು ಪಾಲಿಶ್‌ ಮಾಡುವುದಾಗಿ ಹೇಳಿದ್ದು, ನಂತರ ಅದನ್ನು ಕರಗಿಸಿ ಪರಾರಿಯಾಗಿದ್ದ. ಈ ಪ್ರಕರಣ ಕುರಿತು ಆರೋಪಿಯನ್ನು ಪೊಲೀಸರು ಇದೀಗ ಪತ್ತೆ ಹಚ್ಚಿ ಬಂಧನ ಮಾಡಿದ್ದು, ತನಿಖೆ ಮಾಡಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದು, ಮಂಗಳೂರು ನಗರದ ಮೂಡಬಿದಿರೆ ತಾಲೂಕಿನ ಗಂಟಲ್ಕಟ್ಟೆ ಎಂಬಲ್ಲಿ ಬಂಧನ ಮಾಡಿದ್ದಾರೆ.

 

You may also like