Home News Bantwal: ಡಿಕೆಶಿ – ಜನಾರ್ಧನ ಪೂಜಾರಿ ಭೇಟಿ, ಮಹತ್ವದ ಚರ್ಚೆ!!

Bantwal: ಡಿಕೆಶಿ – ಜನಾರ್ಧನ ಪೂಜಾರಿ ಭೇಟಿ, ಮಹತ್ವದ ಚರ್ಚೆ!!

Hindu neighbor gifts plot of land

Hindu neighbour gifts land to Muslim journalist

Bantwal: ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಅವರು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಮಾತುಕತೆ ನಡೆಸಿದರು.

ಯಸ್, ನಿನ್ನೆ ಫೆ.6 ಹಿರಿಯ ಕಾಂಗ್ರೆಸ್‌ ನಾಯಕರಾದ (Congress leader) ಜನಾರ್ದನ ಪೂಜಾರಿ (Janardan poojari) ಅವರ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಭೇಟಿ ನೀಡಿದ್ದು , ಅವರ ಆರೋಗ್ಯ ವಿಚಾರಿದ್ದಾರೆ. 

ಪೂಜಾರಿಯವರು ಡಿಸಿಎಂ ಅವರ ಜತೆ ಸಾಕಷ್ಟು ಹೊತ್ತು ಮಾತುಕತೆ ನಡೆಸಿ ರಾಜಕೀಯವಾಗಿ ಹೆಚ್ಚಿನ ಏಳಿಗೆಯನ್ನು ಸಾಧಿಸಿ ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಗಳ ಜತೆಗೆ ಸಿಎಂ ಪದವಿಯನ್ನೂ ಏರುವಂತಾಗಲಿ ಎಂದು ಹರಸಿದರು ಎನ್ನಲಾಗಿದೆ.

 ಭೇಟಿಯ ಬಳಿಕ ಡಿಕೆ ಶಿವಕುಮಾರ್ ಅವರು ‘ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಅಪಾರ ಅನುಭವ ಹೊಂದಿರುವ ಜನಾರ್ದನ ಪೂಜಾರಿ ಅವರು ಸದಾ ಜನಪರ ಚಿಂತನೆಗಳೊಂದಿಗೆ ಕಾರ್ಯನಿರ್ವಹಿಸಿದ ನಾಯಕರಾಗಿದ್ದಾರೆ. ಹೀಗಾಗಿ ಅವರ ನಿವಾಸಕ್ಕೆ ತೆರಳಿ, ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.

ಈ ಸಂದರ್ಭ ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯಕುಮಾರ್‌ ಸೊರಕೆ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ. ಹರೀಶ್‌ ಕುಮಾರ್‌ ಮತ್ತಿತರಿದ್ದರು.