

ಸಕಲೇಶಪುರ: ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಬ್ಯಾಂಕೊಂದು ಗ್ರಾಹಕನ ಬಳಿ 9 ರೂ 34 ಪೈಸೆ ಸಾಲ ಕಟ್ಟಿಸಿಕೊಂಡ ಘಟನೆ ನಡೆದಿದ್ದು, ಇದಕ್ಕೆ ಗ್ರಾಹಕ 10 ರೂ. ಪಾವತಿ ಮಾಡಿ 66 ಪೈಸೆ ವಾಪಸ್ ಕೊಡಿ ಎಂದು ಪಟ್ಟು ಹಿಡಿದ ಘಟನೆ ನಡೆದಿದೆ.
ಸಕಲೇಶಪುರದ ಚೊಕ್ಕಣ್ಣ ಗೌಡ ಎಂಬ ಗ್ರಾಹಕ ಕೆನರಾ ಬ್ಯಾಂಕ್ನಿಂದ ಐವತ್ತು ಸಾವಿರ ಸಾಲ ಪಡೆದು ಬಡ್ಡಿ ಸಮೇತ ಮರು ಪಾವತಿ ಮಾಡಿದ್ದರೂ ಬುಧವಾರ ಬ್ಯಾಂಕ್ನಿಂದ ಕರೆ ಮಾಡಿ 9 ರೂ. 34 ಪೈಸೆ ಸಾಲ ತೀರಿಸಲು ಸೂಚನೆ ನೀಡಲಾಗಿತ್ತು.
ಅದಕ್ಕಾಗಿ ಚೊಕ್ಕಣ್ಣ ಗೌಡ ಸಕಲೇಶಪುರ ಪಟ್ಟಣದಲ್ಲಿರುವ ಕೆನರಾಬ್ಯಾಂಕ್ ಶಾಖೆಗೆ ಹೋಗಿ ಹತ್ತು ರೂ. ಪಾವತಿ ಮಾಡಿದ್ದಾರೆ. ಆದರೆ ಅನಂತರ 66 ಪೈಸೆ ವಾಪಸು ಕೊಡಲು ಹಠ ಹಿಡಿದಿದ್ದಾರೆ.
ಕೊನೆಗೆ ಬ್ಯಾಂಕ್ ಸಿಬ್ಬಂದಿ ಸಾಲ ವಾಪಸ್ ಕೇಳಿ ತಾವು ಕರೆ ಮಾಡಿಲ್ಲ. ಕಂಪ್ಯೂಟರ್ ಟೆಲಿಕಾಲ್ನಿಂದ ಈ ತಪ್ಪು ಆಗಿದೆ ಎಂದು ಸಬೂಬು ಹೇಳಿ ಗ್ರಾಹಕ ಚೊಕ್ಕಣ್ಣ ಗೌಡರನ್ನು ಕಳುಹಿಸಿರುವುದಾಗಿ ವರದಿಯಾಗಿದೆ.
