HomeNewsಹವಾಮಾನ ವೈಪರಿತ್ಯ, 227 ಮಂದಿ ಇದ್ದ ಭಾರತೀಯ ವಿಮಾನ ಲ್ಯಾಂಡ್ ಮಾಡಿಸಲು ಒಪ್ಪಿಗೆ ಕೊಡದ ಪಾಕ್!

ಹವಾಮಾನ ವೈಪರಿತ್ಯ, 227 ಮಂದಿ ಇದ್ದ ಭಾರತೀಯ ವಿಮಾನ ಲ್ಯಾಂಡ್ ಮಾಡಿಸಲು ಒಪ್ಪಿಗೆ ಕೊಡದ ಪಾಕ್!

Hindu neighbor gifts plot of land

Hindu neighbour gifts land to Muslim journalist

Shrinagara: ದೆಹಲಿಯಿಂದ ಶ್ರೀರಂಗರಕ್ಕೆ ಹೊರಟಿದ್ದ 27 ಮಂದಿ ಪ್ರಯಾಣಿಕರಿಂದ ಇಂಡಿಗೋ ವಿಮಾನ ವಿಪರೀತವಾಗಿ ಸುರಿಯುತ್ತಿರುವ ಆಲಿಕಲ್ಲು ಮಳೆಯ ಕಾರಣದಿಂದಾಗಿ ಶ್ರೀನಗರದಲ್ಲಿ ಲ್ಯಾಂಡ್ ಮಾಡಲು ಸಾಧ್ಯವಾಗದ ಕಾರಣ ಪಾಕ್ ನ ಲಾಹೋರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಉಳಿಸುವಂತೆ ಲ್ಯಾಂಡ್ ಗೊಳಿಸಲು ಅನುಮತಿ ಕೊಡುವಂತೆ ಇಂಡಿಗೋ ವಿಮಾನದ ಪೈಲೆಟ್ ಹಾಗೂ ಭಾರತೀಯ ವಿಮಾನ ಯಾನ ಇಲಾಖೆ ಮನವಿ ಮಾಡಿಕೊಂಡರು ಸಹ ಒಂದಿಷ್ಟು ಕರುಣೆ ಯಿಂಗ್ ಮಾಡಿಸಲು ನಿರಾಕರಣೆ ತೋರಿದ ಘಟನೆ ಇಂದು ನಡೆದಿದೆ.

ಇನ್ನು ಮುಂಜಾನೆ ದೆಹಲಿಯಿಂದ ಶ್ರೀನಗರಕ್ಕೆ 227 ಪ್ರಯಾಣಿಕರನ್ನು ಹೊತ್ತು ತೆರಳಿದ್ದ ಭಾರತೀಯ ಇಂಡಿಗೋ ವಿಮಾನ ಟೇಕ್ ಅಪ್ ಆದ ಕೆಲವೇ ಕ್ಷಣಗಳಲ್ಲಿ ಧಾರಾಕಾರವಾಗಿ ಆಲಿಕಲ್ಲು ಸಹಿತ ವಿಪರೀತ ಮಳೆ ಸುರಿಯುತ್ತಿರುವ ಕಾರಣದಿಂದಾಗಿ ಶ್ರೀನಗರ ವಿಮಾನ್ ನಿಲ್ದಾಣದಲ್ಲಿ ವಿಮಾನವನ್ನು ಇಳಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪೈಲೆಟ್ ತಕ್ಷಣ ಪಾಕ್ ನ ಲಾಹೋರ್ ನ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಅವಕಾಶ ಕೊಡುವಂತೆ ಪಾಕ್ ನ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದ .ಅದೇ ರೀತಿ ಭಾರತೀಯ ವಿಮಾನ ಯಾನ ಸಂಸ್ಥೆ ಕೂಡ ಪಾಕ್ ನ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿತ್ತು. ಆದರೆ ಪಾಕ್ ಇದಕ್ಕೆ ಯಾವುದೇ ರೀತಿಯಲ್ಲಿ ಸ್ಪಂದನೆ ನೀಡದೆ ಅತಂತ್ರ ಸ್ಥಿತಿಯಲ್ಲಿರುವ 227 ಮಂದಿ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವುದಾಗಿ ವರದಿಯಾಗಿದೆ.

RELATED ARTICLES

Most Popular

Recent Comments