Homelatestಗಂಡಸಲ್ಲ ಎಂದು ಕಿಚಾಯಿಸಿದ್ದಕ್ಕೆ ಗೆಳೆಯನನ್ನೇ ಕೊಂದ! ತಮಾಷೆ ಅಮಾಸೆಯಾಗಿ ಕೊನೆಗೆ ಪ್ರಾಣವೇ ಹೋಯ್ತು!!

ಗಂಡಸಲ್ಲ ಎಂದು ಕಿಚಾಯಿಸಿದ್ದಕ್ಕೆ ಗೆಳೆಯನನ್ನೇ ಕೊಂದ! ತಮಾಷೆ ಅಮಾಸೆಯಾಗಿ ಕೊನೆಗೆ ಪ್ರಾಣವೇ ಹೋಯ್ತು!!

Hindu neighbor gifts plot of land

Hindu neighbour gifts land to Muslim journalist

ಸ್ನೇಹಿತರು ಎಣ್ಣೆ ಪಾರ್ಟಿ ಮಾಡೋದು ಸಹಜ. ಪಾರ್ಟಿಯಾದ ಬಳಿಕ ತಮಾಷೆಯ ಮಾತುಗಳು ಬಂದೇ ಬರುತ್ತವೆ. ಹುಸಿ ಕೋಪಗಳೂ ಶುರುವಾಗುತ್ತವೆ. ನಶೆ ಇಳಿದ ಬಳಿಕ ಮತ್ತದೇ ಸ್ನೇಹ ಸಂಬಂಧ ಕಂಟಿನ್ಯೂ ಆಗಿ, ಏನೂ ಆಗಿಯೇ ಇಲ್ಲವೆನ್ನುವಂತೆ ಇರುತ್ತಾರೆ. ಆದರೆ ಇದೀಗ ಕುಡಿದ ಸ್ನೇಹಿತರ ತಮಾಷೆಯ ಮಾತುಗಳು ಕೊಲೆಯಲ್ಲಿ ಅಂತ್ಯವಾದ ದಾರುಣ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು, ಅವರಿಬ್ಬರು ಸ್ನೇಹಿತರು. ಪ್ರತೀ ದಿನ ಒಟ್ಟಿಗೆ ಕೆಲಸಕ್ಕೆ ಹೋಗ್ತಿದ್ರು. ರಾತ್ರಿಯಾಗ್ತಿದ್ದಂತೆ ಒಟ್ಟಿಗೆ ಎಣ್ಣೆ ಪಾರ್ಟಿ ಕೂಡ ಮಾಡ್ತಿದ್ರು. ಆದರೆ ನಶೆಯಲ್ಲಿ ಮಾತನಾಡಿದ್ದ ಅದೊಂದು ಮಾತು ಇಬ್ಬರ ನಡುವೆ ಜಗಳ ತಂದಿಟ್ಟಿತ್ತು. ಅದೇ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕು ಹರವೆ ಗ್ರಾಮದ ಸಣ್ಣಸ್ವಾಮಿ ನಾಯಕ ಎಂಬಾತ ಕೃಷಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ. ಪತ್ನಿ ಮಕ್ಕಳ ಜತೆ ಅನ್ಯೋನ್ಯವಾಗಿದ್ದ. ಆದರೀಗ ಸಣ್ಣಸ್ವಾಮಿ ತನ್ನ ಗೆಳೆಯನಿಂದಲೇ ಕೊಲೆಯಾಗಿದ್ದಾನೆ. ತನ್ನ ಸ್ನೇಹಿತನಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದಾನೆ.

ಹರವೆ ಗ್ರಾಮದ ಸಣ್ಣಸ್ವಾಮಿ ಹಾಗೂ ಕುಮಾರ್ ಅಲಿಯಾಸ್‌ ಚಿಗರೆ ಎನ್ನುವ ಆಸಾಮಿ ಇಬ್ಬರೂ ಮೊದಲಿನಿಂದಲೂ ಗೆಳೆಯರು. ಇದರಲ್ಲಿ ಕುಮಾರನಿಗೆ ಮದುವೆಯಾಗಿರಲಿಲ್ಲ. ಆದರೂ ಒಬ್ಬರನೊಬ್ಬರು ಬಿಟ್ಟಿರಿದಷ್ಟು ಆತ್ಮೀಯತೆ ಇಬ್ಬರಲ್ಲಿ. ಒಟ್ಟಿಗೆ ಕೆಲಸಕ್ಕೆ ಹೋಗುವುದು, ಒಟ್ಟಿಗೇ ಊಟ ತಿಂಡಿ ಮಾಡುವುದು, ಅಷ್ಟೇ ಅಲ್ಲ ರಾತ್ರಿಯಾದ್ರೆ ಸಾಕು ಒಟ್ಟಿಗೆ ಎಣ್ಣೆ ಪಾರ್ಟಿ ಕೂಡಾ ಮಾಡಿಕೊಳ್ಳುತ್ತಿದ್ದರು. ಆದರೀಗ ತಮಾಷೆಯ ಮಾತೇ ಅಮಾಸೆಯಾಯಿತು ಎಂಬಂತೆ ಸಣ್ಣ ಸ್ವಾಮಿ ಗೆಳೆಯನೇ ಚಾಕುವಿನಿಂದ ಇರಿದು ಕೊಲೆ ಮಾಡಿ ಎಸ್ಕೇಪ್‌ ಆಗಿದ್ದಾನೆ.

ಯಾವಾಗಲೂ ಪಾರ್ಟಿ ಮಾಡುವಂತೆ ಮೊನ್ನೆ ರಾತ್ರಿ ಇಬ್ಬರು ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತು ಆರಂಭವಾಗಿದ್ದು, ಇನ್ನು ಮದುವೆಯಾಗದ ಕುಮಾರ್‌ನಿಗೆ ಸಣ್ಣ ಸ್ವಾಮಿ‌ನಾಯಕ ತಮಾಷೆ ಮಾಡೋಣ ಎಂದು ಕೊಂಡು ಸುಮ್ಮನೆ ಕಿಚಾಯಿಸಿದ್ದಾನೆ. ನೀನು ಗಂಡಸೇ ಅಲ್ಲ ಅನ್ನೋ‌ ಅನುಮಾನ ಎಲ್ಲರಿಗೂ ಇದೆ. ಅದಕ್ಕೆ ನಿನಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಅಂತಾ ಗಂಭೀರ ಅರೋಪ ಮಾಡಿದ್ದ. ಇದ್ರಿಂದ ರೊಚ್ಚಿಗೆದ್ದ ಕುಮಾರ್ ಸಣ್ಣ ಸ್ವಾಮಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.

ಈ ಪ್ರಕರಣದ ಬಗ್ಗೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. ತಲೆ ಮರೆಸಿಕೊಂಡಿರುವ ಕುಮಾರ್ ಅಲಿಯಾಸ್ ಚಿಗರೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಒಟ್ಟಿನಲ್ಲಿ ನೀನು ಗಂಡಸೇ ಅಲ್ಲ ಅಂತಾ ಆಡಿದ್ದ ಒಂದೇ ಮಾತಿಗೆ ಸ್ವಾಮಿ ನಾಯಕ್‌ ಕೊಲೆಯಾಗಿ ತಮಾಷೆ ಹೋಗಿ ಅಮಾಸೆ ಆದಂಗಾಗಿದ್ದು ದುರಂತವೇ ಸರಿ

RELATED ARTICLES

Most Popular

Recent Comments