Home latest ಉಡುಪಿ | ಮಾಂಸಾಹಾರ ಸೇವಿಸಿ ಕೃಷ್ಣಮಠಕ್ಕೆ ಭೇಟಿ ನೀಡಿದ ಗೋವಾ ಸಿ.ಎಂ ?!

ಉಡುಪಿ | ಮಾಂಸಾಹಾರ ಸೇವಿಸಿ ಕೃಷ್ಣಮಠಕ್ಕೆ ಭೇಟಿ ನೀಡಿದ ಗೋವಾ ಸಿ.ಎಂ ?!

Hindu neighbor gifts plot of land

Hindu neighbour gifts land to Muslim journalist

ಉಡುಪಿ:ಗೋವಾ ಮುಖ್ಯ ಮಂತ್ರಿ ಉಡುಪಿಗೆ ಆಗಮಿಸಿದ್ದ ವೇಳೆ ಮಾಂಸಾಹಾರ ಸೇವಿಸಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ ಎನ್ನುವ ಗಂಭೀರ ಆರೋಪವೊಂದು ಕೇಳಿಬಂದಿದೆ. ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉಡುಪಿ ಭೇಟಿಯ ಸಂದರ್ಭ ಸರ್ಕ್ಯೂಟ್ ಹೌಸ್ ನಲ್ಲಿ ತಂಗಿದ್ದು, ಬಳಿಕ ಮಾಂಸಾಹಾರ ಸೇವಿಸಿ ಬಳಿಕ ಕೃಷ್ಣಮಠಕ್ಕೆ ಭೇಟಿ ನೀಡಿದ್ದಾರೆ, ಅಲ್ಲದೇ ಜಿಲ್ಲೆಯ ಬಿಜೆಪಿ ನಾಯಕರೂ ಜೊತೆಗಿದ್ದರು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆರೋಪಿಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಂಸಾಹಾರ ಸೇವಿಸಿದ್ದನ್ನು ಪ್ರಶ್ನಿಸಿದ್ದ ಬಿಜೆಪಿಗರಿಗೆ ಇದು ಕಾಣಲ್ಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಮಾಂಸಾಹಾರ ಸೇವಿಸಿ ಮಠ ಪ್ರವೇಶಿಸಿದಲ್ಲದೇ, ಯತಿಗಳಿಂದ ಪ್ರಸಾದ ಸ್ವೀಕರಿಸಿದ್ದಾರೆ. ಸದಾ ಕಾಂಗ್ರೆಸ್ಸಿಗರನ್ನು ಟಿಕೀಸುವ ಬಿಜೆಪಿಗರು ಈ ವಿಚಾರದಲ್ಲಿ ಸುಮ್ಮನಿದ್ದಾರೆಯೇ!? ಸಿದ್ದರಾಮಯ್ಯರ ವಿರುದ್ಧ ಅಪಪ್ರಚಾರ ನಡೆಸುವ ಬಿಜೆಪಿಗರು ಈ ವಿಚಾರದಲ್ಲಿ ಜನತೆಗೆ ಹೇಗೆ ಉತ್ತರಿಸಲಿದ್ದಾರೆ ಎಂದು ರಮೇಶ್ ಕಾಂಚನ್ ಆಕ್ರೋಶ ಹೊರಹಾಕಿದ್ದಾರೆ.

ಅಲ್ಲದೇ ಕಾಂಗ್ರೆಸ್ ನಾಯಕರು ದೇವಸ್ಥಾನಕ್ಕೆ ಭೇಟಿ ಕೊಟ್ಟಾಗ ಮಾಂಸಾಹಾರ ತಿಂದು ಹೋದರು ಎಂದು ಸುದ್ದಿ ಹಬ್ಬಿಸುವುದು, ಹಿಂದೂ ವಿರೋಧಿಗಳು ಎಂದು ಮುಗ್ಧ ಜನರನ್ನು ದಾರಿ ತಪ್ಪಿಸುವುದು ಎಂದರಲ್ಲದೇ, ಗೋವಾ ಮುಖ್ಯ ಮಂತ್ರಿಯ ಈ ನಡೆಗೆ ಬಿಜೆಪಿಯವರು ಹೇಗೆ ಉತ್ತರಿಸಲಿದ್ದಾರೆ ಎಂದು ಪ್ರಶ್ನಿಸಿದರು. ಸದ್ಯ ಈ ವಿಚಾರ ಸುದ್ದಿಯಾಗಿದ್ದು, ನಿಜಕ್ಕೂ ಮಾಂಸಾಹಾರ ಸೇವಿಸಿ ಮಠ ಪ್ರವೇಶಿಸಿದ್ದಾರೆಯೇ ಎನ್ನುವುದನ್ನು ಬಿಜೆಪಿ ಹಿರಿಯ ನಾಯಕರು, ಉಡುಪಿ ಜಿಲ್ಲಾ ಬಿಜೆಪಿ ಸ್ಪಷ್ಟನೆ ನೀಡಬೇಕಿದೆ.