HomeNationalGruha lakshmi scheme: ಗೃಹಲಕ್ಷ್ಮಿ ದುಡ್ಡು ಬರದ ಯಜಮಾನಿಯರಿಗೆ ಹೊಡೀತು ಬಂಪರ್ ಲಾಟ್ರಿ- ನಿಮ್ಮ ಕೈ...

Gruha lakshmi scheme: ಗೃಹಲಕ್ಷ್ಮಿ ದುಡ್ಡು ಬರದ ಯಜಮಾನಿಯರಿಗೆ ಹೊಡೀತು ಬಂಪರ್ ಲಾಟ್ರಿ- ನಿಮ್ಮ ಕೈ ಸೇರೋದು ಬರೀ 2,000 ಅಲ್ಲ ಭರ್ತಿ 4,000 !!

Hindu neighbor gifts plot of land

Hindu neighbour gifts land to Muslim journalist

Gruha lakshmi scheme money: ಗೃಹಲಕ್ಷ್ಮೀ ಯೋಜನೆ ಜಾರಿಯಾಗಿ 15 ದಿನ ಕಳೆಯುತ್ತಾ ಬಂದರೂ ಇನ್ನು ಹಲವು ಮಹಿಳೆಯರ ಖಾತೆಗೆ ಹಣ ಜಮಾ ಆಗಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ಮಹಿಳೆಯರು ಬೇಸರದಲ್ಲಿಯೇ ದಿನ ದೂಡುತ್ತಿದ್ದಾರೆ. ಆದರೆ ಈ ಬೆನ್ನಲ್ಲೇ ಹಣ( Gruha lakshmi scheme money) ಬರದ ಮಹಿಳೆಯರಿಗೆ ಸಕ್ಕತ್ ಗುಡ್ ನ್ಯೂಸ್ ಸಿಕ್ಕಿದೆ.

ಹೌದು, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳ ಪ್ರೀತಿಯಿಂದ ಆಗಿರುವಂತಹ ಗೃಹಲಕ್ಷ್ಮಿ ಯೋಜನೆಗೆ ಕಳೆದ ತಿಂಗಳ ಅಂತ್ಯದಲ್ಲೇ ಚಾಲನೆ ಸಿಕ್ಕಿತ್ತು. ಇದಾದ ಬಳಿಕ ರಾಜ್ಯದ ಎಲ್ಲಾ ಯಜಮಾನಿಯರ ಖಾತೆಗೆ 2,000 ರೂ ಜಮಾ ಆಗಿದೆ. ಮಹಿಳೆಯರು ಕೂಡ ಈ ಹಣ ಡ್ರಾ ಮಾಡಿ ಸಂತೋಷ ಪಟ್ಟಿದ್ದಾರೆ. ಆದರೆ ಇನ್ನೂ ಕೂಡ ಕೆಲವು ಮಹಿಳೆಯರ ಖಾತೆಗೆ ಹಣ ಬಂದು ಜಮಾ ಆಗಿಲ್ಲ. ಆದರೆ ಈ ಬೆನ್ನಲ್ಲೇ ಹಣ ಬರದ ಮಹಿಳೆಯರಿಗೆ ಸಕ್ಕತ್ ಗುಡ್ ನ್ಯೂಸ್ ಸಿಕ್ಕಿದೆ. ಅದೇನೆಂದರೆ ಹಣ ಬಾರದ ಮಹಿಳೆಯರಿಗೆ ಬರೀ 2,000 ರೂ ಬರುವುದಲ್ಲ. ಭರ್ತಿ 4,000 ರೂ ಜಮೆಯಾಗುತ್ತದೆ.

ಜಿಜವಾಗಿಯೂ ಕೂಡ ಹೌದು. ಅಕ್ಕಪಕ್ಕದ ಮನೆಯವರ ಖಾತೆಗೆಲ್ಲ 2000 ರೂ. ಜಮಾ ಆಯ್ತು, ಆದರೆ ನಿಮ್ಮ ಖಾತೆಗೆ ಮಾತ್ರ ಹಣ ಬಂದಿಲ್ಲ ಅಂತ ಬೇಸರದಿಂದ ಇರೋರಿಗೆ ನಾವು ಹೇಳುವುದು ಖಂಡಿತಾ ಖುಷಿ ಕೊಡುತ್ತದೆ. ಯಾಕೆಂದರೆ ದುಡ್ಡು ಬಂದಿಲ್ಲ ಎಂದು ಚಿಂತೆನೇ ಬೇಡ. ನಿಮ್ಮ ಖಾತೆಯಲ್ಲಿ ಎಲ್ಲವೂ ಸರಿಯಾಗಿದ್ದು ನಿಮ್ಮ ಅರ್ಜಿ ಕೂಡ ಸ್ವೀಕಾರವಾಗಿದ್ರೆ ಎರಡಲ್ಲ ಒಟ್ಟಿಗೆ ನಾಲ್ಕು ಸಾವಿರ ರೂಪಾಯಿಗಳು ನಿಮ್ಮ ಖಾತೆಗೆ ಜಮಾ ಆಗುತ್ತೆ!

ಒಟ್ಟಿಗೆ ಬರುತ್ತೆ 4 ಸಾವಿರ !!
ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಹಲವರ ಖಾತೆಗೆ ಬರಲಿಲ್ಲ ಎನ್ನುವುದು ಸತ್ಯ. ಆದರೆ ಇದರ ಜೊತೆಗೆ ಸರ್ಕಾರ ಇನ್ನೊಂದು ಗುಡ್ ನ್ಯೂಸ್ (Good News) ನೀಡಿದ್ದು ಮೊದಲಿನ ಕಂತಿನ ಹಣ ಬಿಡುಗಡೆಯಾಗುವ ಪ್ರಕ್ರಿಯೆ ಮುಂದುವರೆಯುತ್ತಿದೆ. ಜೊತೆಗೆ ಎರಡನೇ ಕಂತಿನ ಹಣ ಕೂಡ ಬಿಡುಗಡೆ ಆಗಲಿದೆ. ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಸಪ್ಟೆಂಬರ್ 15 ರಿಂದ ಅಂದರೆ ಇನ್ನು ಕೇವಲ ಮೂರು ದಿನಗಳಲ್ಲಿ ಫಲಾನುಭವಿಗಳ ಖಾತೆಗೆ (Bank Account) ಹಣ ಹಾಕುವ ಪ್ರಕ್ರಿಯೆ ಆರಂಭವಾಗುತ್ತದೆ. ಹೀಗಾಗಿ ಹಣ ಬರದವರಿಗೆ ಒಟ್ಟೊಟ್ಟಿಗೆ 2 ತಿಂಗಳ ಹಣ ಸೇರಿ 4,000 ರೂ ಜಮಾ ಆಗಲಿದೆ.

ಹಣ ವರ್ಗಾವಣೆ ಆಗದಿರಲು ಕಾರಣವೇನು?
ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್‌ (Lakshmi hebbalkar) ♡3 ಸಲ್ಲಿಸಿರುವವರ ಪೈಕಿ ಶೇಕಡ 45% ನಷ್ಟು ಮಹಿಳೆಯರಿಗೆ ಇನ್ನೂ ಹಣ ವರ್ಗಾವಣೆ ಆಗಿಲ್ಲ. ಇದಕ್ಕೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಸಮಸ್ಯೆ ಅಥವಾ ಆಧಾರ್ ಕಾರ್ಡ್ (Aadhaar Card) ಸೀಡಿಂಗ್ ಆಗದೆ ಇರುವ ಸಮಸ್ಯೆ ಕಾರಣವಾಗಿದ್ದರೆ ಸರ್ಕಾರದ ಸರ್ವರ್ ಡೌನ್ ಆಗಿರುವುದು ಹಾಗೂ ಆರ್‌ಬಿಐ ಇಂದ ಹಂತ ಹಂತವಾಗಿ ಹಣ ಬಿಡುಗಡೆ ಆಗುತ್ತಿರುವುದು ಕೂಡ ಒಂದು ಕಾರಣ.

ಇದನ್ನೂ ಓದಿ: Varsha – varun love breakup: ಇನ್‌ಸ್ಟಾದಲ್ಲಿ ಹವಾ ಸೃಷ್ಟಿಸಿದ್ದ ಜೋಡಿ ಹಕ್ಕಿಗಳೀಗ ದೂರ ದೂರ !! ಅರೆ.. ಏನಾಯ್ತು ಇವರಿಗೆ, ವರ್ಷಾ ಕಾವೇರಿ- ವರುಣ್ ಸಂಬಂಧ ಕಾವೇರಿದ್ದು ಯಾಕೆ ?

RELATED ARTICLES

2 COMMENTS

Most Popular

Recent Comments