HomelatestTragic: ಕಾರು ಮತ್ತು ಟ್ರಕ್‌ ನಡುವೆ ಭೀಕರ ಅಪಘಾತ! ದೇವರ ದರ್ಶನ ಮಾಡಿ ಬಂದವರು ಮಸಣ...

Tragic: ಕಾರು ಮತ್ತು ಟ್ರಕ್‌ ನಡುವೆ ಭೀಕರ ಅಪಘಾತ! ದೇವರ ದರ್ಶನ ಮಾಡಿ ಬಂದವರು ಮಸಣ ಸೇರಿದ್ರು! 8 ಮಂದಿ ಸ್ಥಳದಲ್ಲೇ ಸಾವು!

Hindu neighbor gifts plot of land

Hindu neighbour gifts land to Muslim journalist

Varanasi road accident : ವಾರಣಾಸಿಯಲ್ಲಿ ಭೀಕರ ಅಪಘಾತವೊಂದು( Varanasi road accident)ನಡೆದಿದೆ. ವಾರಣಾಸಿಯ ಸುರಾಹಿ ಗ್ರಾಮದಲ್ಲಿ ಕಾರು ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಪಿಲಿಭಿತ್ ನಿವಾಸಿಗಳು ಎಂದು ಗುರುತಿಸಲಾಗಿದೆ. ಮಾಹಿತಿ ಪ್ರಕಾರ ಎಲ್ಲರೂ ವಾರಣಾಸಿಗೆ ಬಂದು ದರ್ಶನ ಪಡೆದು ಮನೆಗೆ ವಾಪಸ್ಸಾಗುತ್ತಿದ್ದರು. ಘಟನೆ ಕುರಿತು ಮಾಹಿತಿ ಪಡೆದ ತಕ್ಷಣ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಕಾರಿನ ಚಾಲಕ ಸೇರಿ ಎಂಟು ಮಂದಿ ಮೃತಪಟ್ಟಿದ್ದಾರೆ.

ವಾರಣಾಸಿ-ಲಖನೌ ಹೆದ್ದಾರಿಯ ಸುರ್ಹಿ ಗ್ರಾಮದಲ್ಲಿ ವೇಗವಾಗಿ ಬಂದ ಎರ್ಟಿಗಾ ಕಾರು ಟ್ರಕ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದವರು ಕಾಶಿ ವಿಶ್ವನಾಥನ ದರ್ಶನ ಮಾಡಿ ಪೂಜೆ ಸಲ್ಲಿಸಿ ಹಿಂತಿರುಗುತ್ತಿದ್ದರು. ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಎಲ್ಲರ ಕುಟುಂಬ ಸದಸ್ಯರಿಗೂ ಮಾಹಿತಿ ನೀಡಲಾಗಿದೆ. ಎಂಟು ವರ್ಷದ ಮಗು ಉಳಿದಿದ್ದು, ಮಗುವಿನ ಸ್ಥಿತಿ ಚಿಂತಾಜನಕವಾಗಿದೆ. ಮೃತರೆಲ್ಲರೂ ಮುಜಾಫರ್‌ನಗರ ಅಂಚೆ ಕಚೇರಿ ದುದಿಯಾಖುರ್ದ್ ಪೊಲೀಸ್ ಠಾಣೆಯ ಪುರನ್‌ಪುರ ಜಿಲ್ಲೆಯ ಪಿಲಿಭಿತ್ ಗ್ರಾಮದ ನಿವಾಸಿಗಳು.

ಬೆಳಿಗ್ಗೆ ನಾಲ್ಕು ಗಂಟೆಯ ಸುಮಾರಿಗೆ ದೊಡ್ಡ ಶಬ್ದ ಕೇಳಿತು. ನಾವು ಆ ಸಮಯದಲ್ಲಿ ಮಲಗಿದ್ದೆವು. ನಾವು ಹೋಗಿ ನೋಡಿದಾಗ ಒಂದು ಕಾರು ಜಖಂಗೊಂಡಿದ್ದು ಅದರಲ್ಲಿ ನಾಲ್ವರು ಸಾವನ್ನಪ್ಪಿರುವುದು ಕಂಡು ಬಂತು ಎಂದು ಸ್ಥಳೀಯರು ಹೇಳಿರುವ ವರದಿಯಾಗಿದೆ.

ಈ ಘಟನೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಂತಾಪ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ.

ಇದನ್ನೂ ಓದಿ: ಮೇಘಸ್ಫೋಟಕ್ಕೆ ನಲುಗಿದ ಸಿಕ್ಕಿಂ!! 23 ಯೋಧರು ಕಣ್ಮರೆ- ತೀವ್ರ ಶೋಧ

RELATED ARTICLES

1 COMMENT

Most Popular

Recent Comments