Home latest Trending News: BTS ಸಂಗೀತ ಕಾರ್ಯಕ್ರಮ ವೀಕ್ಷಿಸಲು ದಕ್ಷಿಣ ಕೊರಿಯಾಕ್ಕೆ ತೆರಳಲು ಮನೆಯಿಂದ ಓಡಿ ಹೋದ...

Trending News: BTS ಸಂಗೀತ ಕಾರ್ಯಕ್ರಮ ವೀಕ್ಷಿಸಲು ದಕ್ಷಿಣ ಕೊರಿಯಾಕ್ಕೆ ತೆರಳಲು ಮನೆಯಿಂದ ಓಡಿ ಹೋದ 3 ಹುಡುಗಿಯರು; ಮುಂದೇನಾಯ್ತು ಗೊತ್ತಾ?

Hindu neighbor gifts plot of land

Hindu neighbour gifts land to Muslim journalist

ದಕ್ಷಿಣ ಕೊರಿಯಾದ ಪಾಪ್ ಬ್ಯಾಂಡ್ BTS ಪ್ರಪಂಚದಾದ್ಯಂತ ಹೆಸರುವಾಸಿ. ಈ ಬ್ಯಾಂಡ್‌ಗೆ ಭಾರತದಲ್ಲೂ ಲಕ್ಷಾಂತರ ಮಂದಿ ಅಭಿಮಾನಿಗಳಿದ್ದಾರೆ. ಆದರೆ ತಮಿಳುನಾಡಿನಲ್ಲಿ ಮೂವರು ಶಾಲಾ ವಿದ್ಯಾರ್ಥಿನಿಯರು ಇವರನ್ನು ಭೇಟಿಯಾಗಲು ತಮ್ಮೊಂದಿಗೆ 14000 ರೂಪಾಯಿಗಳೊಂದಿಗೆ ಪಾಸ್‌ಪೋರ್ಟ್‌ ಇಲ್ಲದೆ ಮನೆಯಿಂದ ಹೊರಟಿರುವ ಘಟನೆಯೊಂದು ನಡೆದಿದೆ. ಮುಂದೇನಾಯ್ತು? ಇಲ್ಲಿದೆ ಸ್ಟೋರಿ.

ವರದಿಯ ಪ್ರಕಾರ, ಮೂವರು ವಿದ್ಯಾರ್ಥಿನಿಯರು ಮನೆಯಿಂದ ಓಡಿ ವಿಶಾಖಪಟ್ಟಣಕ್ಕೆ ಹೋಗಲು ಪ್ಲ್ಯಾನ್‌ ಮಾಡಿದ್ದರು. ಆದರೆ ಮಧ್ಯರಾತ್ರಿ ಊಟ ಮಾಡಲು ರೈಲು ನಿಲ್ದಾಣದಲ್ಲಿ ಊಟಕ್ಕೆಂದು ಇಳಿದಿದ್ದು, ವಾಪಸ್‌ ಬರುವಾಗ ತಮ್ಮ ರೈಲನ್ನು ತಪ್ಪಿಸಿಕೊಂಡಿದ್ದಾರೆ. ಅನಂತರ ಈ ಪ್ರಕರಣದ ಕುರಿತು ಪೊಲೀಸರಿಗೆ ಮಾಹಿತಿ ದೊರಕಿದ್ದು, ನಂತರ ಅವರನ್ನು ಚೈಲ್ಡ್‌ ಲೈನ್‌ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ.

ಈ ವರ್ಷ ಎಷ್ಟು ಭಾರತೀಯ ಮುಸ್ಲಿಮರು ಹಜ್‌ಗಾಗಿ ಮೆಕ್ಕಾ-ಮದೀನಾಕ್ಕೆ ಹೋಗಲು ಸಾಧ್ಯ?ಇಲ್ಲಿದೆ ಬಿಗ್ ಅಪ್ಡೇಟ್‌

ಏನಿದು ಘಟನೆ?
ತಮಿಳುನಾಡಿನ ಕರೂರ್‌ ಜಿಲ್ಲೆಯ ಗ್ರಾಮವೊಂದರಲ್ಲಿ ವಾಸಿಸುತ್ತಿರುವ ಮೂವರು ಬಾಲಕಿಯರು 13ವರ್ಷದವರಾಗಿದ್ದು, ಸರಕಾರಿ ಶಾಲೆಯೊಂದರಲ್ಲಿ 8ನೇ ತರಗತಿ ಓದುತ್ತಿದ್ದಾರೆ. ಇವರು ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ಗೆ ಹೋಗಲು ನಿರ್ಧಾರ ಮಾಡಿದ್ದಾರೆ. ದಕ್ಷಿಣ ಕೊರಿಯಾಗೆ ಇವರು ಹಡಗಿನ ಮೂಲಕ ಹೋಗಲು ನಿರ್ಧಾರ ಮಾಡಿದ್ದರು ಎಂದು ಮಕ್ಕಳ ಕಲ್ಯಾಣ ಸಮಿತಿಯ ಅಧಿಕಾರಿ ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದಾರೆ. ತಮಿಳುನಾಡಿನ ತೂತುಕುಡಿ ನಂತರ ಆಂಧ್ರಪ್ರದೇಶ ವಿಶಾಖಪಟ್ಟಣ ಬಂದರಿನ ಮೂಲಕ ಇವರು ಪ್ಲ್ಯಾನ್‌ ಮಾಡಿದ್ದರು.

ಈ ಯೋಜನೆಯೊಂದಿಗೆ, ಮೂವರು ಹುಡುಗಿಯರು ಜನವರಿ 4 ರಂದು ಸದ್ದಿಲ್ಲದೆ ತಮ್ಮ ಮನೆಯಿಂದ ಹೊರಬಂದು ಈರೋಡ್‌ನಿಂದ ಚೆನ್ನೈಗೆ ರೈಲಿನಲ್ಲಿ ಬಂದರು. ಈ ಮೂವರ ಬಳಿ ಒಟ್ಟು 14 ಸಾವಿರ ರೂ. ಇಷ್ಟು ಹಣದಲ್ಲಿ ಬಿಟಿಎಸ್ ತಲುಪುತ್ತೇನೆ ಎಂಬ ವಿಶ್ವಾಸ ಆಕೆಗಿತ್ತು. ಸತತ ಪರಿಶ್ರಮದ ಬಳಿಕ ಗುರುವಾರ ರಾತ್ರಿ ಚೆನ್ನೈನ ಹೊಟೇಲ್ ಒಂದರಲ್ಲಿ ರೂಂ ಸಿಕ್ಕಿತು. ಶುಕ್ರವಾರ ಅವಳು ಮುಂದೆ ಹೋಗಲು ಇಲ್ಲಿಂದ ಅಲ್ಲಿಗೆ ಅಲೆದಾಡುತ್ತಲೇ ಇದ್ದಳು. ಬೇಸತ್ತು ಬೇರೆ ದಾರಿಯಿಲ್ಲದೆ ಮನೆಗೆ ಮರಳಲು ನಿರ್ಧರಿಸಿದರು. ಮೂವರೂ ಶುಕ್ರವಾರ ಚೆನ್ನೈನಿಂದ ರೈಲು ಹತ್ತಿದ್ದಾರೆ.ಈ ನಡುವೆ ಬಾಲಕಿಯ ಕುಟುಂಬದವರು ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸುತ್ತಮುತ್ತಲ ಜಿಲ್ಲೆಗಳಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರು. ಮೂವರೂ ಆಹಾರ ಖರೀದಿಸಲು ಕಟಪಾಡಿ ರೈಲು ನಿಲ್ದಾಣದಲ್ಲಿ ಇಳಿದಾಗ, ಅವರು ತಮ್ಮ ರೈಲು ತಪ್ಪಿಸಿಕೊಂಡರು. ಠಾಣೆಗೆ ಬಂದ ಪೊಲೀಸರು ಅವರನ್ನು ಹಿಡಿದು ಚೈಲ್ಡ್ ಲೈನ್ ಗೆ ಒಪ್ಪಿಸಿದ್ದಾರೆ.

ಈ ನಡುವೆ ಬಾಲಕಿಯರ ಕುಟುಂಬದವರು ನಾಪತ್ತೆಯಾಗಿರುವ ಕುರಿತು ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಹಾಗಾಗಿ ಪೊಲೀಸರು ಸುತ್ತಮುತ್ತಲ ಜಿಲ್ಲೆಗಳ ಪೊಲೀಸರಿಗೆ ಮಾಹಿತಿ ನೀಡಿದ್ದರು. ಯಾವಾಗ ಈ ಮೂವರು ಬಾಲಕಿಯರು ಆಹಾರ ಖರೀದಿಸಲೆಂದು ರೈಲು ನಿಲ್ದಾಣದಲ್ಲಿ ಇಳಿದರೋ ಆಗ ಅವರಿಗೆ ತಾವು ಬಂದಿದ್ದ ಟ್ರೈನ್‌ ಮಿಸ್‌ ಆಗಿದೆ. ನಂತರ ಪೊಲೀಸರ ಕೈಗೆ ಇವರು ಸಿಕ್ಕಿದ್ದು, ಚೈಲ್ಡ್‌ ಲೈನ್‌ಗೆ ಒಪ್ಪಿಸಿದ್ದು, ನಂತರ ವೆಲ್ಲೂರು ಜಿಲ್ಲೆಯ ಸರಕಾರಿ ಸೌಲಭ್ಯದಲ್ಲಿ ಇರಿಸಲಾಗಿತ್ತು. ನಂತರ ಪೋಷಕರಿಗೆ ಮತ್ತು ಮಕ್ಕಳಿಗೆ ಕೌನ್ಸಲಿಂಗ್‌ ಮಾಡಲಾಯಿತು. ನಂತರ ವಿದ್ಯಾರ್ಥಿನಿಯರು BTS ಗೆ ಸಂಬಂಧಿಸಿದ ಮಾಹಿತಿಯನ್ನು ನೀಡಿದ್ದಾರೆ.

ಮೂವರು ಹುಡುಗಿಯರು ತಮ್ಮ ಅಧ್ಯಯನದತ್ತ ಮಾತ್ರ ಗಮನಹರಿಸುವಂತೆ ಪ್ರೋತ್ಸಾಹಿಸಲಾಯಿತು, ಆದರೆ ಪೋಷಕರು ತಮ್ಮ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದರ ಮೇಲೆ ನಿಗಾ ಇಡಲು ಸಲಹೆ ನೀಡಿದರು.