Home latest ಆಟೋದಲ್ಲಿ ಬಂದ ಪತ್ನಿ, ಗಂಡ ಚಿಲ್ಲರೆ ತರಲೆಂದು ಹೋದಾಗ ನಾಪತ್ತೆ | ಅನಂತರ ಅಲ್ಲಿ ನಡೆದದ್ದು...

ಆಟೋದಲ್ಲಿ ಬಂದ ಪತ್ನಿ, ಗಂಡ ಚಿಲ್ಲರೆ ತರಲೆಂದು ಹೋದಾಗ ನಾಪತ್ತೆ | ಅನಂತರ ಅಲ್ಲಿ ನಡೆದದ್ದು ಏನು?

Hindu neighbor gifts plot of land

Hindu neighbour gifts land to Muslim journalist

ಮನಸ್ಸು ಕೆಟ್ಟರೆ ಕೆಲವೊಮ್ಮೆ ಏನಾಗುತ್ತೆ ಅನ್ನೋದನ್ನು ಊಹಿಸೋಕೂ ಆಗೋದಿಲ್ಲ. ಅದರಲ್ಲೂ ಗಂಡ ಹೆಂಡತಿಯರ ವಿಷಯದಲ್ಲಂತೂ ಅತೀ ಸೂಕ್ಷ್ಮ ವಿಚಾರ ಎಂದೇ ಹೇಳಬಹುದು. ಎಷ್ಟೋ ಬಾರಿ ಗಲಾಟೆಯಾದಾಗ, ಇಲ್ಲೇ ಇದ್ಳು ಎಲ್ಲೋದ್ಳು ಅಂತ ಅನಿಸುವುದು ಸಹಜ. ಹಾಗೇನೇ ಇಲ್ಲೊಂದು ಘಟನೆ ನಡೆದಿದೆ. ಏನೆಂದು ತಿಳಿಯೋಣ.

ಆಟೋದಲ್ಲಿ ಪತಿ ಜತೆಗೇ ಬಂದಿದ್ದ ಪತ್ನಿ, ಬಳಿಕ ಬಾಡಿಗೆ ಹಣ ಕೊಡಲು ಗಂಡ ಚಿಲ್ಲರೆ ತರಲು ಹೋಗಿ ಬರುವಷ್ಟರಲ್ಲಿ ಮಗನೊಂದಿಗೆ ಕಣ್ಮರೆಯಾಗಿದ್ದಾಳೆ. ಈ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ಸಂಭವಿಸಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಈ ಪ್ರಕರಣ ನಡೆದಿದ್ದು, ರುದ್ರವ್ವ ಬಸವರಾಜ್ ಬನ್ನೂರು (30) ಮತ್ತು ಆಕೆಯ ಪುತ್ರ ಶಿವಲಿಂಗಪ್ಪ ಬನ್ನೂರ (2) ನಾಪತ್ತೆಯಾದವರು.

ಗಂಡ ಹೆಂಡತಿಯರ ಮಧ್ಯೆ ಕೌಟುಂಬಿಕ ಕಲಹ ಇತ್ತು. ಹಾಗಾಗಿ ರುದ್ರವ್ವ ತನ್ನ ಎರಡು ವರ್ಷದ ಪುತ್ರನ ಜೊತೆಗೆ ಇಡಗುಂಡಿಯಲ್ಲಿನ ತವರು ಮನೆಯಲ್ಲಿದ್ದಳು. ಹಾಗಾಗಿ ಬಸವರಾಜ್ ಹೆಂಡತಿಯ ಮನವೊಲಿಸಿ, ಆಕೆಯನ್ನು ರಾಮದುರ್ಗಕ್ಕೆ ಕರೆದುಕೊಂಡು ಬಂದಿದ್ದ. ಬಂದವನೇ ಆಟೋ ಬಾಡಿಗೆ ಕೊಡಲೆಂದು, ಬಸವರಾಜ್ ಚಿಲ್ಲರೆ ತರಲು ಹೋದಾಗ ಪುತ್ರನ ಜೊತೆಗೆ ರುದ್ರವ್ವ ಪಕ್ಕದ ನದಿಗೆ ಹಾರಿದ್ದಾಳೆ.

ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಪಕ್ಕದ ಮಲಪ್ರಭಾ ನದಿಗೆ ಪುತ್ರನೊಂದಿಗೆ ಈಕೆ ಹಾರಿದ್ದಾಳೆ. ತಾಯಿ-ಮಗು ನದಿಗೆ ಹಾರಿರುವುದನ್ನು ನೋಡಿದ ಪ್ರತ್ಯಕ್ಷದರ್ಶಿಗಳು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಸವರಾಜ್ ನದಿಯ ಪಕ್ಕದಲ್ಲಿರುವ ಚಪ್ಪಲಿ ನನ್ನ ಪತ್ನಿಯದ್ದು ಎಂದು ಬಸವರಾಜ್ ಹೇಳಿದ್ದು, ಅವರಿಬ್ಬರೂ ನದಿಗೆ ಹಾರಿರುವುದನ್ನು ಖಚಿತ ಪಡಿಸಿದ್ದಾರೆ. ಸ್ಥಳಕ್ಕೆ ರಾಮದುರ್ಗ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ತಾಯಿ ಮಗುವಿಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.