Home latest ವರಮಹಾಲಕ್ಷ್ಮೀ ಹಬ್ಬದ ಹಿಂದಿನ ದಿನವೇ ಮತ್ತೊಂದು ಭೂಕಂಪ | ಭಯಭೀತರಾದ ಜನ

ವರಮಹಾಲಕ್ಷ್ಮೀ ಹಬ್ಬದ ಹಿಂದಿನ ದಿನವೇ ಮತ್ತೊಂದು ಭೂಕಂಪ | ಭಯಭೀತರಾದ ಜನ

Hindu neighbor gifts plot of land

Hindu neighbour gifts land to Muslim journalist

ಈ ಬಾರಿಯ ಮಳೆ, ಭೂಕಂಪನ, ಗುಡ್ಡಕುಸಿತದಿಂದ ಜನ ನಿಜಕ್ಕೂ ಕಂಗಾಲಾಗಿ ಹೋಗಿದ್ದಾರೆ. ಇವತ್ತು ಮತ್ತೊಂದು ಕಡೆ ಭೂಕಂಪವೊಂದು ಸಂಭವಿಸಿದೆ. ಛತ್ತೀಸ್‌ಗಢದಲ್ಲಿ ಗುರುವಾರ (ಆಗಸ್ಟ್ 4, 2022) ಬೆಳಗ್ಗೆ 3.0 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪನವು 11:57ಕ್ಕೆ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಸುರ್ಗುಜಾ ವಿಭಾಗದ ಸೂರಜ್‌ಪುರದಿಂದ 15 ಕಿಮೀ ದೂರದಲ್ಲಿ ಭೂಕಂಪನದ ಅನುಭವವಾಗಿದೆ. 10 ಕಿಮೀ ಆಳದಲ್ಲಿ ಭೂಕಂಪವಾಗಿದೆ ಕೇಂದ್ರ ಮಾಹಿತಿ ನೀಡಿದೆ. ಈ ಭೂಕಂಪನದ ಪರಿಣಾಮವಾಗಿ ಯಾವುದೇ ದೊಡ್ಡ ಹಾನಿ ಅಥವಾ ಗಾಯಗಳ ತಕ್ಷಣದ ವರದಿಯಾಗಿಲ್ಲ.

ಜಪಾನ್‌ನ ಫುಕುಶಿಮಾ ಪ್ರಾಂತ್ಯದ ಕರಾವಳಿಯಲ್ಲಿ ಗುರುವಾರ 5.6 ರ ಪ್ರಾಥಮಿಕ ತೀವ್ರತೆಯೊಂದಿಗೆ ಮತ್ತೊಂದು ಭೂಕಂಪ ಸಂಭವಿಸಿದೆ. ಸದ್ಯ ಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ. ಜಪಾನ್ ಹವಾಮಾನ ಸಂಸ್ಥೆ (JMM) ನೀಡಿರುವ ಮಾಹಿತಿ ಪ್ರಕಾರ ಬೆಳಗ್ಗೆ 9.48 ಕ್ಕೆ ಸಂಭವಿಸಿದ ಕಂಪನವು 37.6 ಡಿಗ್ರಿ ಉತ್ತರ ಅಕ್ಷಾಂಶದಲ್ಲಿ ಮತ್ತು 141.7 ಡಿಗ್ರಿ ಪೂರ್ವ ರೇಖಾಂಶದಲ್ಲಿ ಅದರ ಕೇಂದ್ರಬಿಂದುದೊಂದಿಗೆ ಕಡಲಾಚೆಯ ಕೇಂದ್ರೀಕೃತವಾಗಿತ್ತು. ಈ ಕುರಿತು ಕ್ಸಿನ್ನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬುಧವಾರ ಮಧ್ಯಾಹ್ನ ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಕೂಡಾ ಭೂಕಂಪನ ಸಂಭವಿಸಿದ್ದು, ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ. ಬುಧವಾರ ಮಧ್ಯಾಹ್ನ 2.31 ಗಂಟೆಗೆ ಜಿಲ್ಲೆಯಲ್ಲಿ 3.6 ತೀವ್ರತೆಯ ಕಂಪನ ಸಂಭವಿಸಿದೆ. ಅದರ ಕೇಂದ್ರಬಿಂದು ರಾಪರ್‌ನಿಂದ 13 ಕಿಮೀ ದಕ್ಷಿಣ-ನೈಋತ್ಯ (SSW) ಆಗಿದೆ ಎಂದು ಗಾಂಧಿನಗರದ ಭೂಕಂಪನ ಸಂಶೋಧನಾ ಸಂಸ್ಥೆ (ISR) ತಿಳಿಸಿದೆ. ಇದು 14.9 ಕಿಮೀ ಆಳದಲ್ಲಿ ದಾಖಲಾಗಿದೆ ಎಂದು ಸಂಸ್ಥೆ ತಿಳಿಸಿದೆ.