Home Interesting ಈ ಹ್ಯಾಂಡ್ಸಮ್ ಐಎಎಸ್ ಅಧಿಕಾರಿಯ ಲುಕ್ ಗೆ ಕ್ಲೀನ್ ಬೌಲ್ಡ್ ಆದ ಹುಡುಗಿಯರು !! |...

ಈ ಹ್ಯಾಂಡ್ಸಮ್ ಐಎಎಸ್ ಅಧಿಕಾರಿಯ ಲುಕ್ ಗೆ ಕ್ಲೀನ್ ಬೌಲ್ಡ್ ಆದ ಹುಡುಗಿಯರು !! | ಸಾಮಾಜಿಕ ಜಾಲತಾಣದಲ್ಲಿ ಇದೀಗ ಸಖತ್ ಫೇಮಸ್ ಆಗಿದ್ದಾರೆ ಈ ಆಫೀಸರ್

Hindu neighbor gifts plot of land

Hindu neighbour gifts land to Muslim journalist

ಈ ಐಎಎಸ್ ಅಧಿಕಾರಿಯ ಲುಕ್ ಗೆ ಅದೆಷ್ಟೋ ಹುಡುಗಿಯರು ಫಿದಾ ಆಗಿದ್ದಾರೆ. ಸಖತ್ ಹ್ಯಾಂಡ್ಸಂ ಆಗಿರುವ ಐಎಎಸ್ ಅಧಿಕಾರಿ ಅಥರ್ ಅಮೀರ್ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಫೋಟೋವನ್ನು ಇನ್‌ಸ್ಟಾ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಅದೀಗ ಸಖತ್ ವೈರಲ್ ಆಗಿದೆ.

ಫೇಸ್‌ಬುಕ್‌ನಲ್ಲಿ 1.5 ಲಕ್ಷಕ್ಕೂ ಹೆಚ್ಚು ಜನರು ಅವರನ್ನು ಅನುಸರಿಸಿದರೆ, ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 6 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. ಕಳೆದ 20 ಗಂಟೆಗಳಲ್ಲಿ ಇನ್‌ಸ್ಟಾ-ಫೇಸ್‌ಬುಕ್‌ನಲ್ಲಿ ವೈರಲ್ ಆಗಿರುವ ‌ಈ ಫೋಟೋಗೆ 4 ಸಾವಿರಕ್ಕೂ ಹೆಚ್ಚು ಜನರು ಕಾಮೆಂಟ್‍ಗಳು ಬಂದಿವೆ. ಈ ಫೋಟೋಗೆ ನೂರಾರು ಹುಡುಗಿಯರು ಹೃದಯದ ಎಮೋಜಿ ಕಳುಹಿಸಿದ್ದು, ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಹುಡುಗಿಯರು ಅಥರ್ ಖಾನ್ ಅವರ ಲುಕ್‍ಗೆ ಫಿದಾ ಆಗಿದ್ದಾರೆ. ‘ಯಾರಿದು ಇಷ್ಟು ಸುಂದರವಾಗಿರುವುದು’ ಎಂದು ಕೆಲವರು ಕಾಮೆಂಟ್ ಕೂಡ ಮಾಡಿದ್ದಾರೆ.

2015ರ UPSC ಪರೀಕ್ಷೆಯಲ್ಲಿ ಅಥರ್ ಖಾನ್ 2ನೇ ರಾಂಕ್ ಗಳಿಸಿದ್ದರು. ಪ್ರಸ್ತುತ ಅವರ ಪೋಸ್ಟಿಂಗ್ ಶ್ರೀನಗರದಲ್ಲಿದೆ. ಬಿಳಿ ಶರ್ಟ್ ಮತ್ತು ಜೀನ್ಸ್‌ನಲ್ಲಿ ಕಾಣಿಸಿಕೊಂಡಿರುವ ಅಥರ್ ತಮ್ಮ ವಿಶಿಷ್ಟ ನೋಟದಿಂದ ಗಮನ ಸೆಳೆಯುತ್ತಿದ್ದಾರೆ. ಅವರ ಈ ಫೋಟೋಗೆ ಫೇಸ್‌ಬುಕ್‌ನಲ್ಲಿ 23 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು ಒಂದೂವರೆ ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ.

ಐಎಎಸ್ ಅಧಿಕಾರಿ ಅಥರ್ ಖಾನ್ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯವರು. ಕಾಲೇಜು ದಿನಗಳಲ್ಲಿಯೇ ಐಎಎಸ್ ಆಗಬೇಕೆಂದು ಅವರು ನಿರ್ಧರಿಸಿದ್ದರು. ಕಾಲೇಜು ಮುಗಿಯುವ ಮೊದಲೇ ಅಥರ್ ಯುಪಿಎಸ್‌ಸಿಗೆ ತಯಾರಿ ಆರಂಭಿಸಿದ್ದರು. ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಳ್ಳುತ್ತಾ ಹಿಮಾಚಲದಲ್ಲಿ ಓದುತ್ತಿದ್ದಾಗ ಯುಪಿಎಸ್‌ಸಿಗೆ ತಯಾರಿ ನಡೆಸಲು ಪ್ರತಿವಾರ ಮಂಡಿಯಿಂದ ದೆಹಲಿಗೆ ಬಸ್‌ನಲ್ಲಿ ಬರುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. ಕಾಶ್ಮೀರದಲ್ಲಿನ ಪರಿಸ್ಥಿತಿ ಹದಗೆಟ್ಟಾಗ, ಕಷ್ಟದ ಸಂದರ್ಭಗಳಲ್ಲಿಯೂ ಅವರು ಐಎಎಸ್ ಅಧ್ಯಯನವನ್ನು ಬಿಟ್ಟಿರಲಿಲ್ಲವಂತೆ.

ಅಥರ್ ಖಾನ್ ಅವರು ತಮ್ಮ ಅತ್ಯುತ್ತಮ ಕೆಲಸಗಳ ಮೂಲಕ ಅನೇಕ ಗೌರವಗಳಿಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ನಡೆದ ಸ್ಮಾರ್ಟ್ ಸಿಟಿ ಅವಾರ್ಡ್ 2022 ಈವೆಂಟ್‌ನಲ್ಲಿ ಅವರ ನಾಯಕತ್ವದಲ್ಲಿ ಶ್ರೀನಗರ ಸ್ಮಾರ್ಟ್ ಸಿಟಿಗೆ ವರ್ಷದ ಅತ್ಯುತ್ತಮ ನಗರ ಪ್ರಶಸ್ತಿ ದೊರಕಿದೆ. ಇದಕ್ಕೂ ಮೊದಲು ಅವರು 2020ರಲ್ಲಿ ಐಐಟಿ ಮಂಡಿಯಿಂದ ಯುವ ಸಾಧಕರ ಪ್ರಶಸ್ತಿಗೆ ಭಾಜನರಾಗಿದ್ದರು. 2019ರಲ್ಲಿ ಭಿಲ್ವಾರಾ ಜಿಲ್ಲಾಡಳಿತವು ಲೋಕಸಭೆ ಚುನಾವಣೆ 2019ರ ಯಶಸ್ವಿ ನಿರ್ವಹಣೆಗಾಗಿ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿತು.