

ಬಿಗ್ಬಾಸ್ನಿಂದ ಹೆಸರು ಮಾಡಿಕೊಂಡಿರುವ ರಜತ್ ಇದೀಗ ಇನ್ನೊಂದು ಹೊಸ ವಿವಾದನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ರಜತ್ ಅವರು ಮೈಸೂರಿನ ಪಾರಂಪರಿಕ ಕಟ್ಟಡ ಡಿಸಿ ಕಚೇರಿ ಮುಂದೆ ಸಿಗರೆಟ್ ಸೇದುತ್ತ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇವರು ಈಗಾಗಲೇ ಸಾರ್ವಜನಿಕ ಸ್ಥಳದಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲಿಗೆ ಹೋಗಿ ಬಂದಿದ್ದರು. ಇದೀಗ ಹೊಸದಾಗಿ ಮೈಸೂರಿನ ಪಾರಂಪರಿಕ ಕಟ್ಟಡದಲ್ಲಿ ಸಿಗರೇಟು ಸೇದುತ್ತಾ ಫೋಟೋ ಶೂಟ್ ಮಾಡಿಸಿದ್ದು, ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
COTPA ಪ್ರಕಾರ (ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ) ಸರಕಾರಿ ಕಚೇರಿ, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ಈ ರೀತಿ ಮಾಡಿದರೆ ದಂಡ ವಿಧಿಸಲಾಗುವುದು.
ಮೈಸೂರಿನ ಕೃಷ್ಣರಾಜ ಬೌಲೆವಾರ್ಡ್ನಲ್ಲಿ ಪಾರಂಪರಿಕ ಡಿಸಿ ಕಚೇರಿ (ಅಟ್ಟಾರಾ ಕಚೇರಿ) ಇದೆ. ಇದು 129 ವರ್ಷ ಹಳೆಯ ಕಚೇರಿ. 1895 ರಲ್ಲಿ ಚಾಮರಾಜ ಒಡೆಯರ್ ಅವರು ನಿರ್ಮಿಸಿದ್ದ ಐತಿಹಾಸಿಕ ಕಟ್ಟಡವಿದು. ಇಂಡೋ-ಸಾರ್ಸೆನಿಕ್ ಶೈಲಿಯಲ್ಲಿರುವ ಈ ಕಟ್ಟಡ, ಪ್ರವಾಸಿ ತಾಣವಾಗಿ ಪರಿವರ್ತಿಸುವ ಯೋಜನೆ ಆಗುತ್ತಿದೆ ಎನ್ನಲಾಗಿದೆ.













