Home Entertainment ನನ್ನಮ್ಮ ಸೂಪರ್ ಸ್ಟಾರ್ 2 ವಂಶಿಕಾ ನಿರೂಪಕಿ ಆಗಿದ್ದಾದ್ರು ಯಾಕೆ? ರಹಸ್ಯ ಬಿಚ್ಚಿಟ್ಟ ತಂಡ

ನನ್ನಮ್ಮ ಸೂಪರ್ ಸ್ಟಾರ್ 2 ವಂಶಿಕಾ ನಿರೂಪಕಿ ಆಗಿದ್ದಾದ್ರು ಯಾಕೆ? ರಹಸ್ಯ ಬಿಚ್ಚಿಟ್ಟ ತಂಡ

Hindu neighbor gifts plot of land

Hindu neighbour gifts land to Muslim journalist

ಎಂಟರ್ಟೈನ್ಮೆಂಟ್ ವಾಹಿನಿಗಳಲ್ಲಿ ನೂರಾರು ರೀತಿಯ ಶೋಗಳು ಪ್ರಸ್ತುತ ಬರುತ್ತಿದೆ. ಜನರ ಮನರಂಜನೆಗಾಗಿ ಹೊಸ ಹೊಸ ಐಡಿಯಾಗಳೊಂದಿಗೆ ಪ್ರಸಾರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ನನ್ನಮ್ಮ ಸೂಪರ್ ಸ್ಟಾರ್ ಕೂಡ ಒಂದು. ಈಗಾಗಲೇ ಸೀಸನ್ ಒಂದು ಮುಗಿಸಿ ಮತ್ತೊಂದು ಸೀಸನ್ ಆರಂಭವಾಗಿದೆ. ಈ ವಾರದಲ್ಲಿ ದೀಪಾವಳಿ ಆಚರಿಸುವ ಎಪಿಸೋಡ್ ಕೂಡ ಜನರನ್ನು ಮನರಂಜಿಸಲು ಮುಂದಾಗಿದ್ದಾರೆ.

ಈ ಶೋನಲ್ಲಿ ಅನುಪಮಾ ಪ್ರಭಾಕರ್, ಸೃಜನ್ ಲೋಕೇಶ್, ತಾರಾ ತೀರ್ಪುಗಾರರು. ನಿರಂಜನ್ ದೇಶಪಾಂಡೆ, ವಂಶಿಕಾ ಅಂಜನಿ ಕಶ್ಯಪ ಅವರು ನಿರೂಪಕರು. ರಿಯಾಲಿಟಿ ಶೋ ತಂಡ ಇದರ ಬಗ್ಗೆ ಮಾಧ್ಯಮದೊಂದಿಗೆ ಇನ್ನಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಕಲರ್ಸ್ ಕನ್ನಡದ ಪ್ರೋಗ್ರಾಮ್ ಹೆಡ್ ಪ್ರಕಾಶ್ ‘ನನ್ನಮ್ಮ ಸೂಪರ್‌ಸ್ಟಾರ್’ ಮಕ್ಕಳ ಮುಗ್ಧತೆ ಇಟ್ಟುಕೊಂಡು ಮನರಂಜನೆ ನೀಡುವ ಕಾರ್ಯಕ್ರಮ. ಬುದ್ದಿವಂತಿಕೆ, ಪ್ರತಿಭೆಗಿಂತ ಮಕ್ಕಳ ಮುಗ್ಧತೆಯೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶ.

ಮೊದಲ ಸೀಸನ್ ದೊಡ್ಡ ಮಟ್ಟದಲ್ಲಿ ಹಿಟ್ ಆದ ಕಾರಣದಿಂದ ಸೀಸನ್ 2 ಆರಂಭವಾಗಿದೆ. ಈ ಕಾರ್ಯಕ್ರಮ ಕೂಡ ಸಕ್ಸಸ್ ಆಗಲಿದೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ. ಹಾಗೆಯೇ “ವಂಶಿಕಾ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ. ಈ ಶೋನಲ್ಲಿ ಹೊಸತು ಇರಲಿ, ಕ್ರಿಯೇಟಿವಿಟಿ ಇರಲಿ ಎಂದು ಅವಳನ್ನು ನಿರೂಪಕಿಯಾಗಿ ಮಾಡಿದ್ದೇವೆ” ಎಂದಿದ್ದಾರೆ.