Dharmasthala : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಧರ್ಮಸ್ಥಳದ ಎಸ್ ಡಿ ಎಂ ಇಂಗ್ಲೀಷ್ ಮೀಡಿಯಂ ಶಾಲೆ ಶೇಕಡಾ 100 ಫಲಿತಾಂಶ ದಾಖಲಿಸಿದೆ. ವಿದ್ಯಾರ್ಥಿನಿಯರಾದ ಜಿ ಮಾಧುರ್ಯ ಮತ್ತು ಪೂರ್ವಿ ಭಟ್ ಕೆ ರವರು ತಲಾ 620 ಅಂಕಗಳಿಸಿ ರಾಜ್ಯಕ್ಕೆ ಆರನೇ ಸ್ಥಾನ ಪಡೆದಿದ್ದಾರೆ.


ಧರ್ಮಸ್ಥಳದ ಅನ್ನಪೂರ್ಣ ಛತ್ರದ ಮ್ಯಾನೇಜರ್ ಸುಬ್ರಹ್ಮಣ್ಯ ಪ್ರಸಾದ್ ಹಾಗೂ ಮಧುರಾ ಹೆಗ್ಡೆ ದಂಪತಿಯ ಪುತ್ರಿ ಮಾಧುರ್ಯ ಹಾಗೂ ಧರ್ಮಸ್ಥಳದ ಉದ್ಯಮಿ ಪ್ರಕಾಶ್ ಭಟ್ ಕೆ ಮತ್ತು ಸಾಧನಾ ಭಟ್ ಬಿ ರವರ ಪುತ್ರಿ ಪೂರ್ವಿ ಭಟ್ 620 ಅಂಕಗಳ ಸಾಧನೆ ಮಾಡಿದ್ದಾರೆ.
ಪರೀಕ್ಷೆಗೆ ಕುಳಿತ 54 ವಿದ್ಯಾರ್ಥಿಗಳಲ್ಲಿ 7ವಿದ್ಯಾರ್ಥಿಗಳು 600 ಅಂಕಗಳಿಗಿಂತ ಹೆಚ್ಚು ಸಾಧನೆ ಮಾಡಿದ್ರೆ, 35 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ ಪ್ರಥಮ ಶ್ರೇಣಿಯಲ್ಲಿ 19 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
