2026ರ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶ ನಿನ್ನೆ ಪ್ರಕಟಗೊಂಡಿದೆ. ಅನೇಕ ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳನ್ನು ಗಳಿಸಿ, ಉತ್ತಮ ಸಾಧನೆಗೈದು ಸಂಭ್ರಮ ಪಡುತ್ತಿದ್ದಾರೆ. ಅಂತೆಯೇ ಇನ್ನೊಬ್ಬಳು ಬಾಲಕಿ ಬದುಕಿಗೆ ಬಡತನ ಹೊರತು ವಿದ್ಯೆಗೆ ಬಡತನ ವಿಲ್ಲವೆಂಬುದನ್ನುಇದೆಲ್ಲದರ ನಡುವೆ ಬಲು ಅಪರೂಪದ ಪ್ರಕರಣ ಒಂದು ಬೆಳಕಿಗೆ ಬಂದಿದ್ದು ಬಾಲಕಿ ಒಬ್ಬಳು ಭಿಕ್ಷೆ ಬೇಡುತ್ತಾ ಹೊಟ್ಟೆ ತುಂಬಿಸಿಕೊಂಡು, ಅಲೆಮಾರಿ ಜೀವನವನ್ನು ನಡೆಸುತ್ತಾ ಛಲ ಬಿಡದೆ ಓದಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. 84.64 (529/625) ಅಂಕಗಳನ್ನು ಪಡೆಯುವ ಮೂಲಕ ಅಸಾಧಾರಣ ಸಾಧನೆ ಮಾಡಿದ್ದಾಳೆ.


ಹೌದು, ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾ ಗ್ರಾಮದ ಸರ್ಕಾರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಸುಜಾತಾ ಭೀಮಶಾ ಗೊಲ್ಲರ SSLC ಪರೀಕ್ಷೆಯಲ್ಲಿ ಶೇ. 84.64 (529/625) ಅಂಕಗಳನ್ನು ಪಡೆಯುವ ಮೂಲಕ ಬಡತನವೆಂಬುದು ಜೀವನkke ಮಾತ್ರ ಆದರೆ ವಿದ್ಯೆಗೆ ಬಡತನವಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ.
ಸುಜಾತಾ ಅವರದ್ದು ಮೂಲತಃ ಅಲೆಮಾರಿ ಸಮುದಾಯವಾದ ಗೊಲ್ಲರ ಜನಾಂಗಕ್ಕೆ ಸೇರಿದ ಅನಕ್ಷರಸ್ಥ ಕುಟುಂಬ. ಈಕೆಯ ಬದುಕಿನ ಭವಣೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಜಿನುಗುತ್ತದೆ. ಹೊಟ್ಟೆಪಾಡಿಗಾಗಿ ಪ್ರತಿದಿನ ಮನೆ ಮನೆಗೆ ತೆರಳಿ ಭಿಕ್ಷೆ ಬೇಡಿ ಹಸಿವು ನೀಗಿಸಿಕೊಳ್ಳಬೇಕಾದ ಅನಿವಾರ್ಯತೆ ಈಕೆಯದು. ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಂಡರೂ ಕೂಡ ಆಕೆಯ ಕನಸಲ್ಲಿ ಶಿಕ್ಷಣವೇ ಧ್ಯಾನ. ಅಲೆಮಾರಿ ಬದುಕಿನ ಕಷ್ಟಗಳ ನಡುವೆ, ಸರ್ಕಾರಿ ಶಾಲೆಯ ಮೆಟ್ಟಿಲೇರಿ ಅಕ್ಷರ ಕಲಿತ ಈ ಪ್ರತಿಭೆ, ಇಂದು ತಾನು ಪಡೆದ ಅಂಕಗಳ ಮೂಲಕ ಬಡತನಕ್ಕೆ ಉತ್ತರ ನೀಡಿದ್ದಾಳೆ.
ಇಂದು ಆಧುನಿಕ ರೀತಿಯ ಎಲ್ಲಾ ಸಕಲ ಸೌಲಭ್ಯಗಳಿದ್ದರೂ ಕೂಡ ಓದಲು ಹಿಂದೇಟು ಹಾಕುವ ವಿದ್ಯಾರ್ಥಿಗಳ ನಡುವೆ ಹರಿದ ಬಟ್ಟೆ ಹಾಕಿಕೊಂಡು, ಭಿಕ್ಷೆ ಬೇಡುತ್ತಾ ಹೊಟ್ಟೆ ತುಂಬಿಸಿಕೊಂಡು, ಅಲೆಮಾರಿ ಜೀವನದ ನಡುವೆ ಕಷ್ಟಪಟ್ಟು ಓದಿ ಎಲ್ಲಾ ವಿದ್ಯಾರ್ಥಿಗಳಿಗೂ ಸುಜಾತ ಮಾದರಿಯಾಗಿದ್ದಾರೆ. ಅಲ್ಲದೆ ಬಸವಣ್ಣನವರ ಉಳ್ಳವರು ಶಿವಾಲಯದ ಮಾಡುವರು ನಾನೇನು ಮಾಡಲಿ ಬಡವನಯ್ಯ ಎಂಬ ವಚನದ ಸಾಲುಗಳೇ ನನ್ನ ಜೀವನಕ್ಕೆ ಸ್ಪೂರ್ತಿ ಎಂದು ಸುಜಾತ ಹೇಳುವುದನ್ನು ಕೇಳಿದರೆ ಆಕೆಯ ಜ್ಞಾನ ಹಾಗೂ ತಿಳುವಳಿಕೆಯ ಸಂಪತ್ತು ಎಂತಹದು ಎಂದು ತಿಳಿದು ಬರುತ್ತದೆ.
ಇನ್ನೂ ಸುಜಾತಾಳ ಈ ಸಾಹಸಗಾಥೆಯನ್ನು ಗುರುತಿಸಿದ ಸ್ಥಳೀಯ ಶಿಕ್ಷಣಪ್ರೇಮಿ ಬಳಗದವರು, ಆಕೆಯ ಮನೆಗೆ ತೆರಳಿ ಸತ್ಕರಿಸಿದ್ದಾರೆ. ‘ಈಕೆಯ ಭವಿಷ್ಯಕ್ಕೆ ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲಬೇಕು’ ಎಂಬ ಆಶಯದೊಂದಿಗೆ ಆಕೆಯ ಮುಂದಿನ ಉನ್ನತ ಶಿಕ್ಷಣಕ್ಕೆ ಶುಭ ಹಾರೈಸಿದ್ದಾರೆ.

