Home Breaking Entertainment News Kannada Death threat to Salman khan: ಸಲ್ಮಾನ್ ಖಾನ್ ಸಾಯಿಸೋದೇ ನನ್ನ ಅಂತಿಮ ಗುರಿ: ಗ್ಯಾಂಗ್...

Death threat to Salman khan: ಸಲ್ಮಾನ್ ಖಾನ್ ಸಾಯಿಸೋದೇ ನನ್ನ ಅಂತಿಮ ಗುರಿ: ಗ್ಯಾಂಗ್ ಸ್ಟರ್ ಸ್ಫೋಟಕ ಹೇಳಿಕೆ

Death threat to Salman khan

Hindu neighbor gifts plot of land

Hindu neighbour gifts land to Muslim journalist

Death threat to Salman khan: ಕೃಷ್ಣಮೃಗ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ (gangster) ಲಾರೆನ್ಸ್ ಬಿಷ್ಣೋಯ್ (Lawrence Bishnoi) ಈಗ ಜೈಲಿನಲ್ಲಿದ್ದಾರೆ. ಆತನ ಕೋಪ ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮೇಲೆ ಕೊಂಚವೂ ತಣ್ಣಗಾಗುತ್ತಿಲ್ಲ. ಆತ ಈಗಾಗಲೇ ಸಲ್ಮಾನ್ ಖಾನ್ ಕೊಲ್ಲಲು ಬಿಷ್ಣೋಯ್ ಮತ್ತು ಟೀಮ್ ಹಲವು ರೀತಿಯಲ್ಲಿ ಪ್ರಯತ್ನ ಮಾಡಿ ವಿಫಲವಾಗಿದೆ. ಈ ಸಂಬಂಧವಾಗಿ ಮತ್ತು ಕಳೆದ ವರ್ಷ ಗಾಯಕ ಮೂಸೇವಾಲನ ಮರ್ಡರ್ ಸಂಬಂಧ ಅನೇಕರ ಬಂಧನ ಕೂಡ ಆಗಿದೆ. ಬಿಷ್ಣೋಯ್ ಈಗ ಜೈಲಿನಲ್ಲೇ ಇದ್ದರೂ ಆತ ಜೈಲಿನಿಂದಲೇ ಮತ್ತೆ ಗುಡುಗಿದ್ದಾನೆ. ಸಲ್ಮಾನ್ ಖಾನ್ ಅನ್ನು ಬಿಡಲ್ಲ ಅನ್ನುವ ಮಾತನಾಡಿದ್ದಾನೆ.

ಲಾರೆನ್ಸ್ ಬಿಷ್ಣೋಯ್ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿ, ‘ನನ್ನ ಜೀವನದ ಅಂತಿಮ ಗುರಿ ಅಂತಿದ್ದರೆ ಅದು ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದೇ ಆಗಿದೆ (Death threat to Salman khan). ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ’ ಎಂದು ಮಾತನಾಡಿದ್ದಾನೆ. ಆತನ ಈ ಖಡಕ್ ಮಾತು ಕೇಳಿ ಬಾಲಿವುಡ್ ತಲ್ಲಣ ಗೊಂಡಿದೆ.

ಒಂದು ವೇಳೆ ಸಲ್ಮಾನ್ ಖಾನ್ ಗೆ ತನ್ನ ಜೀವ ಉಳಿಸಿಕೊಳ್ಳಬೇಕು ಎಂದರೆ, ತನ್ನ ಮಾತನ್ನು ಕೇಳಲೇಬೇಕು ಎಂದು ಲಾರೆನ್ಸ್ ಹೇಳಿದ್ದು, ಯಾವುದೋ ಜಾಗದಲ್ಲಿ ನಿಂತು ಕ್ಷಮೆ ಕೇಳಿದರೆ ನಾವು ಯಾವತ್ತೂ ಅದನ್ನು ಒಪ್ಪುವುದಿಲ್ಲ. ಆತ ಬಿಕಾನೇರ್ ನಲ್ಲಿರುವ ನಮ್ಮ ದೇವಸ್ಥಾನಕ್ಕೆ ಹೋಗಿ ಕ್ಷಮೆ ಕೇಳಬೇಕು ಎಂದು ಲಾರೆನ್ಸ್ ಒತ್ತಿ ಹೇಳಿದ್ದಾನೆ. ಸಲ್ಮಾನ್ ಖಾನ್ ಗೆ ತುಂಬಾನೇ ಅಹಂ ಇದೆ. ಆತನಿಗೆ ಅಂಗರಕ್ಷಕರು ಇಲ್ಲದಿದ್ದರೆ ಇಷ್ಟೊತ್ತಿಗೆ ಪ್ರಾಣ ಹಾರಿ ಹೋಗಿರುತ್ತಿತ್ತು ಎಂದಿದ್ದಾನೆ ಲಾರೆನ್ಸ್ ಬಿಷ್ಣೊಯ್!

ಹಲವು ದಶಕಗಳ ಹಿಂದೆ ಸಲ್ಮಾನ್ ಖಾನ್ ವಿರುದ್ಧ ಕೃಷ್ಣ ಮೃಗ ಕೊಂದ ಪ್ರಕರಣ ದಾಖಲಾದರೂ, ಅವರು ಕ್ಷಮೆ ಕೇಳಿಲ್ಲ. ಅವರು ಕ್ಷಮೆ ಕೇಳುವತನಕ ಈ ಯುದ್ಧ ನಿಲ್ಲುವುದಿಲ್ಲ. ಮುಂದಿನ ಎಲ್ಲ ಪರಿಣಾಮಗಳಿಗೆ ಸಲ್ಮಾನ್ ಸಿದ್ಧವಾಗಿರಬೇಕು ಎಂದು ಲಾರೆನ್ಸ್ ಗುಡುಗಿದ್ದಾನೆ. ಈತನ ಮಾತಿಗೆ ಪೊಲೀಸ್ ಇಲಾಖೆ ಯಾವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳತ್ತೋ ಎನ್ನುವುದು ಒಂದು ಯೋಚನೆಯಾದರೆ ಇನ್ನೊಂದು ಕಡೆ ಸಲ್ಮಾನ್ ಖಾನ್ ವಿಷ್ಣು ಸಮುದಾಯದ ಕ್ಷಮೆ ಕೇಳಿ, ಜೀವದ ರಕ್ಷಣೆ ಮಾಡಿಕೊಳ್ಳುತ್ತಾರೆಯಾ ಎನ್ನುವುದನ್ನು ಕಾದು ನೋಡಬೇಕಿದೆ.