Home » Kamalakar Bhat : ‘ಜ್ಯೋತಿಷ್ಯ ಹೇಳ್ತೀನಿ ಪ್ಲೀಸ್ ಕೇಳಿ’- ಜೈಲಲ್ಲಿ ಸಿಬ್ಬಂದಿಗಳಿಗೆ, ಅಧಿಕಾರಿಗಳಿಗೆ ಕಮಲಾಕರ್ ಭಟ್ ಕಿರಿಕಿರಿ

Kamalakar Bhat : ‘ಜ್ಯೋತಿಷ್ಯ ಹೇಳ್ತೀನಿ ಪ್ಲೀಸ್ ಕೇಳಿ’- ಜೈಲಲ್ಲಿ ಸಿಬ್ಬಂದಿಗಳಿಗೆ, ಅಧಿಕಾರಿಗಳಿಗೆ ಕಮಲಾಕರ್ ಭಟ್ ಕಿರಿಕಿರಿ

0 comments

Kamalakar Bhat : ಕೊಲೆ ಆರೋಪದಡಿ ಜೈಲು ಪಾಲಾಗಿರುವ ನಾಡಿನ ಖ್ಯಾತ ಜ್ಯೋತಿಷಿ ಎನಿಸಿದ್ದ ಕಮಲಾಕರ್ ಭಟ್, ಜೈಲಿನಲ್ಲಿ ಕೂಡ ತಮ್ಮ ಜ್ಯೋತಿಷ್ಯ ಪುರಾಣವನ್ನು ನಿಲ್ಲಿಸಿಲ್ಲವಂತೆ. ಜೈಲು ಸಿಬ್ಬಂದಿಗಳಿಗೂ ಜ್ಯೋತಿಷ್ಯ ಹೇಳ್ತೀನಿ ಕೇಳಿ ಪ್ಲೀಸ್ ಎಂದು ದುಂಬಾಲು ಬೀಳುತ್ತಿದ್ದಾರಂತೆ 

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ (Siddapura) ವಸಂತ್​ ನಾಯ್ಕ್​​ ಕೊಲೆ ಪ್ರಕರಣ ರಾಜ್ಯಾಧ್ಯಂತ ಸದ್ದು ಮಾಡಿತ್ತು. ಖ್ಯಾತ ಜ್ಯೋತಿಷಿ ಕಮಲಾಕರ್​ ಭಟ್ (Kamalakar Bhat)​​​​​ ಮತ್ತು ಸುಚಿತ್ರಾ (Suchitra) ಅನೈತಿಕ ಸಂಬಂಧ ಬಟಾಬಯಲಾಗಿತ್ತು. ಅಲ್ಲದೆ ಲವ್ ವಿಚಾರಕ್ಕೆ ಕೊಲೆಯನ್ನು ಕೂಡ ಮಾಡಿ ಈ ಗ್ಯಾಂಗ್ ಇದೀಗ ಜೈಲು ಪಾಲಾಗಿದೆ. ಜೈಲಲ್ಲೂ ಸುಮ್ಮನಿರದ ಕಮಲಾಕರ್ ಭಟ್ ಇದೀಗ ಅಲ್ಲಿರುವ ಕೈದಿಗಳಿಗೆ ಹಾಗೂ ಸಿಬ್ಬಂದಿಗಳಿಗೆಲ್ಲ ಜ್ಯೋತಿಷ್ಯ ಹೇಳುತ್ತೇನೆ, ವಶೀಕರಣ ಮಾಡುತ್ತೇನೆ ಎಂದು ತಲೆ ತಿನ್ನುತ್ತಿದ್ದಾರಂತೆ.

ಯಸ್, ಕಲಾಕಾರ ಕಮಲಾಕರ್ ಭಟ್ ಜೈಲಿನಲ್ಲೂ ಖೈದಿಗಳಿಗೆ ಜ್ಯೋತಿಷ್ಯ ಶಾಸ್ತ್ರ ಹೇಳುವುದನ್ನು ಮುಂದುವರಿಸಿದ್ದಾರಂತೆ. ಅಷ್ಟೇ ಅಲ್ಲದೇ ಜೈಲಲ್ಲೆ ವಶೀಕರಣದ ತಂತ್ರ ಮಾಡ್ತಿನಿ ಅಂತಾ ಹೇಳುತ್ತಿದ್ದಾರಂತೆ. ಹಾಗೇ ಜೈಲು ಸಿಬ್ಬಂದಿಗೂ ಭವಿಷ್ಯ ಹೇಳ್ತಿನಿ ಅಂತಾ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಆರೋಪಿ ಕಮಲಾಕರ್​​ ಭಟ್​​ ಜೈಲು ಸಿಬ್ಬಂದಿ, ಖೈದಿಗಳಿಗೆ ಮಾತ್ರವಲ್ಲದೇ ಜೈಲರ್​ ಬಳಿ ಹೋಗಿ ನಿಮ್ಮ ಭವಿಷ್ಯ ಹೇಗಿದೆ ಅಂತಾ ನೊಡೋಣ ಎಂದಿದ್ದರಂತೆ. ಇದಕ್ಕೆ ನಿನ್ನ ಭವಿಷ್ಯ ನಿಂಗ್ ಗೊತ್ತಿದ್ರೆ ನೀನು ಯಾಕ್ ಇಲ್ಲಿ ಬಂದು ರೊಟ್ಟಿ ಮುರಿತ್ತಿದ್ದೆ? ಎಂದು ಗದರಿಸಿದ ಜೈಲರ್ ಬುದ್ದಿ ಹೇಳಿ ಕಳಿಸಿದ್ದಾರಂತೆ.

You may also like