Home Karnataka State Politics Updates ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದಿಂದ ನಳಿನ್ ಕುಮಾರ್ ಕಟೀಲ್ ಕೆಳಗಿಳಿಸಲು ನಡೆಯುತ್ತಿದೆಯೇ ತೆರೆಮರೆಯ ಹುನ್ನಾರ ?? |...

ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟದಿಂದ ನಳಿನ್ ಕುಮಾರ್ ಕಟೀಲ್ ಕೆಳಗಿಳಿಸಲು ನಡೆಯುತ್ತಿದೆಯೇ ತೆರೆಮರೆಯ ಹುನ್ನಾರ ?? | ಅಚ್ಚರಿಯಾಗಿಸಿದೆ ರಹಸ್ಯವಾಗಿ ಸಿಎಂ ಜೊತೆ ಮಾತಿಗಿಳಿದ ನಳಿನ್ ಕುಮಾರ್ ಕಟೀಲ್ ನಡೆ!!|ರಾಜ್ಯಾಧ್ಯಕ್ಷ ಪಟ್ಟದ ರೇಸ್ ನಲ್ಲಿದ್ದಾರಂತೆ ಮೂವರು ನಾಯಕರು!!

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ನಳಿನ್ ಕುಮಾರ್ ಕಟೀಲ್ ಅವರನ್ನು ಇಳಿಸಲು ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿರುವ ನಡುವೆಯೇ, ರಹಸ್ಯವಾಗಿ ಬೊಮ್ಮಾಯಿ ಜೊತೆ ಕಟೀಲ್ ಮಾತಿಗಿಳಿದ ಮಾಹಿತಿ ವರದಿಯಾಗಿದೆ.

ನಳಿನ್ ಕುಮಾರ್ ಕಟೀಲ್ ರಾಜ್ಯಾಧ್ಯಕ್ಷ ಸ್ಥಾನದ ಬಳಿಕ ಮೂವರ ಹೆಸರು ಸದ್ಯ ಕೇಳಿ ಬಂದಿದೆ. ಈ ಬೆಳವಣಿಗೆ ನಡುವೆ ನಳಿನ್ ಕುಮಾರ್ ಕಟೀಲ್ ಸಿಎಂ ಬೊಮ್ಮಾಯಿ ನಿವಾಸದಲ್ಲಿ ರಹಸ್ಯ ಸಭೆ ನಡೆಸಿದ್ದಾರೆ.ಸಿಎಂ ಖಾಸಗಿ ನಿವಾಸಕ್ಕೆ ಭೇಟಿ ನೀಡಿದ ನಳಿನ್ ಕುಮಾರ್ ಕಟೀಲ್, ಸುಮಾರು 40 ನಿಮಿಷಗಳ ಕಾಲ ಚರ್ಚೆ ನಡೆಸಿದರು.

2023ರ ಚುನಾವಣೆಯನ್ನು ಎದುರಿಸಲು ರಾಜ್ಯ ಬಿಜೆಪಿ ಹೊಸ ಸಾರಥಿಯ ಹುಡುಕಾಟದಲ್ಲಿ ತೊಡಗಿದ್ದು,ಈಗಾಗಲೇ ಮೂವರ ಹೆಸರು ಕೇಳಿ ಬಂದಿದೆ.ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕಂದಾಯ ಸಚಿವ ಆರ್.ಅಶೋಕ್, ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಈ ಮೂವರ ಹೆಸರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿ ಬಂದಿದೆ ಎಂದು ಹೇಳಲಾಗಿದೆ.