ಕೇಸರಿ ಶಾಲು ಧರಿಸಿದರೆ ಹುಷಾರ್ | ಹಿಂದೂ ಯುವಕನಿಗೆ ಹಲ್ಲೆ ನಡೆಸಿದ ಅನ್ಯಕೋಮಿನ ಯುವಕರು

Share the Article

ಬಂಟ್ವಾಳ : ಅನ್ಯಕೋಮಿನ ತಂಡವೊಂದು ಯುವಕನನ್ನು ಅಡ್ಡಗಟ್ಟಿ ದಾಳಿ ನಡೆಸಿದ ಘಟನೆ ಸೆ.26 ರಂದು ರಾತ್ರಿ ಅಡ್ಯನಡ್ಕದ ಮರಕ್ಕಿಣಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದವರನ್ನು ಗಿರೀಶ್ (33) ಎಂದು ಗುರುತಿಸಲಾಗಿದೆ.

ಗಿರೀಶ್ ರವರು ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ದಾರಿ ಮಧ್ಯೆ ಅಡ್ಡಗಟ್ಟಿದ ಅನ್ಯಕೋಮಿನ ತಂಡ ‘ನೀನು ಕೇಸರಿ ಶಾಲು ಹಾಕಿಕೊಂಡು ಬಾರಿ ತಿರುಗಾಟ ನಡೆಸುತ್ತಿಯಾ ಎಂದು ಗದರಿಸಿ ಹಲ್ಲೆ ನಡೆಸಿದ್ದಾರೆ.

ಹಲ್ಲೆ ನಡೆಸಿದವರ ಪೈಕಿ ಮಹಮ್ಮದ್, ಅಲಿ ಎಂಬಿಬ್ಬರ ಪರಿಚಯವಿದೆ. ಮತ್ತೆ ನಾಲ್ವರನ್ನು ಇನ್ನೊಮ್ಮೆ ನೋಡಿದರೆ ಗುರುತಿಸಬಲ್ಲೆ ಈ ತಂಡ ನನ್ನನ್ನು ದಾರಿ ಮಧ್ಯೆ ಅಡ್ಡ ಕಟ್ಟಿ ಕೇಸರಿ ಶಾಲು ಹಾಕಿದ್ದಕ್ಕೆ ಬೆದರಿಸಿ, ಕೈಗೆ ಯಾವುದೋ ಉಪಕರಣದಿಂದ ಬಲವಾಗಿ ಚುಚ್ಚಿದ್ದಾರೆ ಇದರಿಂದಾಗಿ ಗಾಯಗೊಂಡಿದ್ದು, ಅಲ್ಲಿಂದ ತಪ್ಪಿಸಿಕೊಂಡು ಹೋಗಿ ತಮ್ಮನಿಗೆ ಕರೆ ಮಾಡಿದ ಬಳಿಕ ಬಂದ ನನ್ನ ತಮ್ಮ ನನ್ನನ್ನು ಆಸ್ಪತ್ರೆಗೆ ಕರೆ ತಂದ ಎಂದು ಗಿರೀಶ್ ತಿಳಿಸಿದ್ದಾರೆ.

Leave A Reply