Home News ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಚಾಲನೆ

ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಚಾಲನೆ

Hindu neighbor gifts plot of land

Hindu neighbour gifts land to Muslim journalist

ಕಡಬ : ಭಾರತೀಯ ಜನತಾ ಪಾರ್ಟಿ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಬೂತ್ ಸಮಿತಿ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆಯ ಕಾರ್ಯಕ್ರಮದ ಅಂಗವಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಳ್ಪ ಗ್ರಾಮದ ಬೂತ್ ಸಂಖ್ಯೆ 105 ರ ಅಧ್ಯಕ್ಷರಾದ ಶ್ರೀ ರತ್ನಾಕರ ಕುಂಜತ್ತಾಡಿ ಅವರ ಮನೆಯಲ್ಲಿ ನಾಮಫಲಕ ಅಳವಡಿಕೆ ಮುಖಾಂತರ ಕಾರ್ಯಕ್ರಮಕ್ಕೆ ಮಾನ್ಯ ಸಚಿವರಾದ ಎಸ್ ಅಂಗಾರ ರವರು ಚಾಲನೆ ನೀಡಿದರು.

ಬಳ್ಪ ಗ್ರಾಮದ ಬೂತ್ ಸಂಖ್ಯೆ 104 ಮತ್ತು 106 , ಕೇನ್ಯ ಗ್ರಾಮದ ಬೂತ್ ಸಂಖ್ಯೆ 103ರ ಅಧ್ಯಕ್ಷರುಗಳಿಗೆ ನಾಮಫಲಕ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಉಪಸ್ಥಿತರಿದ್ದರು .

ಬೂತ್ ಅಧ್ಯಕ್ಷರಾದ ಸುಂದರ ಗೌಡ, ಪ್ರಶಾಂತ್ ಎಣ್ಣೆ ಮಜಲು, ಹೊನ್ನಪ್ಪ ಎ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕುಸುಮ ರೈ, ಪ್ರಮುಖರಾದ ರಮಾನಂದ ಎಣ್ಣೆ ಮಜಲು , ಜಯರಾಮ ಅಲ್ಕಬೆ, ರಘುನಾಥ ರೈ, ವಿನೋದ್ ಬೊಲ್ಮಳೆ, ಶ್ರೀಕೃಷ್ಣಭಟ್ ,ಸದಾನಂದ ಕಾಜರ, ಪುಟ್ಟಣ್ಣ ಗೌಡ ,ತಾರಾ ರೈ ,ಯಮುನಾ ಕಾಜರ, ರಾಜೀವ, ತೀರ್ಥೇಶ್, ಪದ್ಮನಾಭ, ಹರ್ಷಿತ್ ,ಮತ್ತಿತರ ಕಾರ್ಯಕರ್ತರು ಭಾಗವಹಿಸಿದ್ದರು.