ಉಜಿರೆ : ಎಸ್.ಡಿ.ಎಂ. ವಸತಿ ಪದವಿ ಪೂರ್ವ ಕಾಲೇಜು ವ್ಯಕ್ತಿತ್ವ ವಿಕಸನ ಕಾರ್ಯಾಗಾರಎಸ್.ಡಿ.ಎಂ. ವಸತಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯರು ಹಾಗೂ ರಾಷ್ಟ್ರ ಮಟ್ಟದ ಜೆಸಿಐ ತರಬೇತುದಾರರಾಗಿರುವ ಡಾ.ಟಿ. ಕೃಷ್ಣಮೂರ್ತಿಯವರು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಕಾರ್ಯಗಾರದಲ್ಲಿ ಗುರಿ ಜೋಡಣೆ ಕುರಿತು ಮಾಹಿತಿ ನೀಡಿದರು.


ಉತ್ತಮ ಗುರಿ ಹಾಕಿಕೊಂಡವರಿಗೆ ನಮ್ಮ ದೇಶದಲ್ಲಿ ಅನೇಕ ರೀತಿಯ ಅವಕಾಶ ಸಿಗುತ್ತವೆ. ನಮ್ಮ ಗುರಿ ಯಾವತ್ತಿಗೂ ಸ್ಪಷ್ಟವಾಗಿರಬೇಕು. ಪುಸ್ತಕಗಳನ್ನು ಓದಿ ಅದರ ಜೊತೆ ಸ್ನೇಹವನ್ನು ಬೆಳೆಸಿಕೊಳ್ಳಿ ಎಂಬಿತ್ಯಾದಿ ಉಪಯುಕ್ತ ವಿಷಯಗಳ ಉದಾಹರಣೆ ಸಹಿತ ಮಾಹಿತಿ ಜೊತೆಗೆ ತರಬೇತು ನೀಡಿದರು.ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ಅಧ್ಯಕ್ಷತೆ ವಹಿಸಿ ಉಪಸ್ಥಿತರಿದ್ದರು.
ರಸಾಯನಶಾಸ್ತ್ರ ಉಪನ್ಯಾಸಕಿ ಚೈತ್ರ ಪ್ರಭು ಸ್ವಾಗತಿಸಿದರು.ಇಂಗ್ಲೀಷ್ ಉಪನ್ಯಾಸಕ ಪಾರ್ಶ್ವನಾಥ ಹೆಗ್ಡೆ ನಿರೂಪಿಸಿ, ವಂದಿಸಿದರು.
