ಭೂತ, ಪ್ರೇತ, ಆತ್ಮಗಳು ಆಗಾಗ ಕೆಲವೊಬ್ಬರ ಮೈಮೇಲೆ ಬರುವುದುಂಟು. ಇದು ನಿಜವೋ, ಸುಳ್ಳೋ ಎಂಬುದು ಇಂದಿಗೂ ಚರ್ಚಿತ ವಿಚಾರ. ಇದೀಗ ಕೊಪ್ಪಳದಲ್ಲೊಂದು ಇಂಥದ್ದೇ ಘಟನೆ ನಡೆದಿದ್ದು, ಸೊಸೆಯ ಮೇಲೆ ಮಾವನ ಆತ್ಮಆಹ್ವಾನ ಆಗಿದೆ. ಅಷ್ಟೇ ಅಲ್ಲ ಬೀಡಿ ಸೇದಿ, ಎಣ್ಣೆ ಹೊಡೆದು ಎಲ್ಲರನ್ನೂ ದಂಗುಬಡಿಸಿದೆ.


ಕೊಪ್ಪಳ ತಾಲೂಕಿನ ಹೊಳೆ ಮುದ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಂದ್ರಪ್ಪ ಎನ್ನುವವರು ಇದಾಗಲೇ ಸತ್ತು 10 ವರ್ಷಗಳ ಮೇಲಾಗಿವೆ. ಅವರಿಗೆ ಬೀಡಿ ಸೇದುವ ಚಟವೂ ಇತ್ತು. ಇದೀಗ ಅವರ ಸೊಸೆ ಹನುಮವ್ವ ಏಕಾಏಕಿ ಬೀಡಿ ಸೇದಲು ಶುರು ಮಾಡಿಬಿಟ್ಟಿದ್ದಾಳೆ. ಸೊಸೆಯಲ್ಲಿ ಆಗಿರುವ ಈ ಬದಲಾವಣೆ ನೋಡಿ ಮನೆಯವರು ದಂಗಾಗಿ ಹೋಗಿದ್ದಾರೆ. ಕೊನೆಗೆ, ಸೊಸೆ ಹನುಮವ್ವ, ನಾನು ಹನುವಮ್ಮ ಅಲ್ಲ, ಚಂದ್ರಪ್ಪ ಎಂದಾಗಿ ಎಲ್ಲರೂ ನಿಂತಲ್ಲೇ ಕುಸಿದು ಹೋಗಿದ್ದಾರೆ.
ಮಾವನ ಆತ್ಮ ಸೊಸೆಯ ಮೇಲೆ ಬಂದಿರುವ ವಿಷಯ ಹಳ್ಳಿಗಳಲ್ಲಿ ಹಲ್ಚಲ್ ಸೃಷ್ಟಿಸಿ, ಜನರು ದೌಡಾಯಿಸುತ್ತಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಚಂದ್ರಪ್ಪನ ಮಗನಿಗೂ ಫೋನ್ ಮಾಡಿ ನಿಮ್ಮ ಅಪ್ಪ ಬಂದಿದ್ದಾನೆ ನೋಡು ಎಂದು ಅಲ್ಲಿನ ಜನರು ವಿಡಿಯೋ ಕಾಲ್ ಮಾಡಿ ತೋರಿಸುವುದು, ಮಾವನ ಆತ್ಮ ಮೈ ಮೇಲೆ ಬಂದಿರುವ ಸೊಸೆಯು ಏನಪ್ಪಾ, ಹೇಗಿದ್ದೀಯಪ್ಪ.. ಎಂದು ಆತನ ಬಳಿ ತಂದೆಯೇ ಕ್ಷೇಮ ಸಮಾಚಾರ ವಿಚಾರಿಸಿದಂತೆ ವಿಚಾರಿಸುವುದನ್ನು, ಬೀಡಿ ಎಳೆದ ಎಳೆದು ಹೊಗೆ ಬಿಡುವುದನ್ನು ಕಾಣಬಹುದು.
ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಎನ್ನುವ ಬಗ್ಗೆ ಕೆಲವರು ತಲೆ ಕೆಡಿಸಿಕೊಂಡಿದ್ದರೆ, ಮತ್ತೆ ಕೆಲವರು ನಿಜಕ್ಕೂ ಮಾವನ ಆತ್ಮ ಸೊಸೆಯ ಮೇಲೆ ಬಂದಿದೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಈಕೆಗೆ ಬೀಡಿ ಸೇದುವ ಇಚ್ಛೆ ಉಂಟಾಗಿದ್ದರಿಂದ ಹೀಗೆ ಮಾಡಿರಬಹುದು ಎನ್ನುತ್ತಿದ್ದಾರೆ.
https://www.instagram.com/reel/DZX8RHJEggU/?igsh=Nmdoem90aXUxZ29s

