ರಾಜ್ಯದ ನೂತನ ಮುಖ್ಯಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಅವರು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಪ್ರಕಟ ಮಾಡಿದ್ದಾರೆ.


ಅರ್ಹ ವಿದ್ಯಾರ್ಥಿಗಳೂ ಸರಕಾರದ ಅಧಿಕೃತ ಸೇವಾಸಿಂಧು ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ https://sevasindhuservices.karnataka.gov.in/buspassservices/ ಲಿಂಕ್ ಬಳಸಬಹುದಾಗಿದೆ.
ವಿದ್ಯಾರ್ಥಿಗಳು ತಮ್ಮ ಸ್ವಂತ ಮೊಬೈಲ್ ಫೋನ್, ಹತ್ತಿರದ ಸೈಬರ್ ಸೆಂಟರ್ ಅಥವಾ ಬೆಂಗಳೂರು ಒನ್ ಕೇಂದ್ರಗಳ ಮೂಲಕವೂ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ನೀವು ಸೈಬರ್ ಸೆಂಟರ್ಗಳಲ್ಲಿ ಅರ್ಜಿ ಸಲ್ಲಿಸಿದರೆ, ಫಾರ್ಮ್ಗಾಗಿ 10ರೂ ಮತ್ತು ಆನ್ಲೈನ್ ಸೇವೆಗಾಗಿ ರೂ.100 ಸೇವಾ ಶುಲ್ಕವನ್ನು ನೀಡಬೇಕಾಗುತ್ತದೆ.
ಉಚಿತ ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳು ಆಧಾರ್ ಕಾರ್ಡ್, ಪ್ರಸ್ತುತ ಶೈಕ್ಷಣಿಕ ವರ್ಷದ ಕಾಲೇಜು ಅಥವಾ ಶಾಲಾ ಪ್ರವೇಶಾತಿ ರಶೀದಿ ಮತ್ತು ಎರಡು ಪಾಸ್ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರಗಳು ಅತ್ಯಗತ್ಯವಾಗಿದೆ.
ಆನ್ಲೈನ್ನಲ್ಲಿ ಯಶಸ್ವಿ ಅರ್ಜಿ ಸಲ್ಲಿಸಿದ ನಂತರ, ವಿದ್ಯಾರ್ಥಿಗಳು ಆ ಅರ್ಜಿಯ ಪ್ರತಿಯನ್ನು ತೆಗೆದುಕೊಂಡು ಹೋಗಿ ತಮ್ಮ ವಿದ್ಯಾಸಂಸ್ಥೆಯ ಮುಖ್ಯಸ್ಥರಿಂದ (ಪ್ರಾಂಶುಪಾಲರು ಅಥವಾ ಮುಖ್ಯೋಪಾಧ್ಯಾರು) ಕಡ್ಡಾಯವಾಗಿ ಸಹಿ ಮತ್ತು ಶಾಲಾ/ಕಾಲೇಜಿನ ಸೀಲು ಹಾಕಬೇಕು.
ನಂತರ ಬಿಎಂಟಿಸಿ ಅಥವಾ ಕೆಎಸ್ಆರ್ಟಿಸಿ ಪಾಸ್ ವಿಭಾಗದ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲನೆ ಮಾಡಿ ಅನುಮೋದನೆ ನೀಡುತ್ತಾರೆ. ಅರ್ಜಿ ಅಪ್ರೂವ್ ಆದ ತಕ್ಷಣವೇ ವಿದ್ಯಾರ್ಥಿಯ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಸಂದೇಶ ಬರಲಿದೆ.
ಮೊಬೈಲ್ಗೆ ಸಂದೇಶ ಬಂದ ನಂತರ ಬೆಂಗಳೂರಿನಲ್ಲಿ ವಿದ್ಯಾರ್ಥಿಗಳು ಮೆಜೆಸ್ಟಿಕ್, ಕೆಂಗೇರಿ, ಶಾಂತಿನಗರ, ಎಲೆಕ್ಟ್ರಾನಿಕ್ ಸಿಟಿ, ಹೊಸಕೋಟೆ ಹಾಗೂ ಆನೇಕಲ್ ಬಸ್ ನಿಲ್ದಾಣಗಳಲ್ಲಿರುವ ಟಿಟಿಎಂಸಿ ಕೇಂದ್ರಗಳಿಗೆ ಭೇಟಿ ನೀಡಿ ತಮ್ಮ ಉಚಿತ ಬಸ್ ಪಾಸ್ ಪಡೆಯಬಹುದು.
ಬೆಂಗಳೂರೇತರ ಅಂದರೆ ರಾಜ್ಯದ ಇತರೆ ಜಿಲ್ಲೆಗಳ ವಿದ್ಯಾರ್ಥಿಗಳ ಅನುಕೂಲಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ವ್ಯಾಪ್ತಿಯಲ್ಲಿ ಒಟ್ಟು 123 ಪಾಸ್ ವಿತರಣಾ ಕೌಂಟರ್ಗಳನ್ನು ತೆರೆದಿದೆ. ಈ ಕೌಂಟರ್ಗಳ ಕುರಿತು https://ksrtc.karnataka.gov.in/studentpass ನಲ್ಲಿ ಮಾಹಿತಿ ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಪಾಸ್ಗಳನ್ನು ಪಡೆದುಕೊಳ್ಳಬಹುದು.

