ನಿನ್ನೆ (ಜೂ. 1) ಬೆಂಗಳೂರು ನಗರದಲ್ಲಿ ರಾಜ್ಯಪಾಲರ ವಾಹನ ಸಂಚಾರದ (ಜೀರೋ ಟ್ರಾಫಿಕ್) ಹಿನ್ನೆಲೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದ್ದು, ಸುಮಾರು 30 ನಿಮಿಷಗಳ ಕಾಲ ವಾಹನ ಸವಾರರು ರಸ್ತೆಯಲ್ಲೇ ಸಿಲುಕುವಂತಾಯಿತು. ಈ ಸಂಚಾರ ದಟ್ಟಣೆಯಲ್ಲಿ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವ್ಯಕ್ತಿಯೊಬ್ಬರು ಸಿಲುಕಿಕೊಂಡು ಪರದಾಡಿದಂತಹ, ಆತ ರಸ್ತೆಯಲ್ಲಿ ಕೂತು ಪ್ರತಿಭಟಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ಸಾರ್ವಜನಿಕರ ಮನವನ್ನೂ ಕಲಕಿತ್ತು. ಆದರೆ ಇದು ಬರೀ ಡ್ರಾಮಾ ಅನ್ನೋದು ಗೊತ್ತಾಗಿದೆ.


ಹೌದು, ರಾಜ್ಯಪಾಲರ ಮಾರ್ಗದಲ್ಲಿ ವಾಹನ ತಡೆದಿದ್ದಕ್ಕೆ ರಸ್ತೆ ಮಧ್ಯೆ ಕುಳಿತು ಪ್ರತಿಭಟಿಸಿದ್ದ ವ್ಯಕ್ತಿಯ ವಿಡಿಯೋ ವೈರಲ್ ಆಗಿತ್ತು. ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಎಂದು ಹೇಳಲಾಗಿತ್ತು. ಆದರೆ, ಪೊಲೀಸ್ ತನಿಖೆಯಿಂದ ಕಾರಿನಲ್ಲಿ ಪತ್ನಿ ಇರಲಿಲ್ಲ ಎಂಬ ಸತ್ಯಾಂಶ ಬಯಲಾಗಿದೆ.
ರಸ್ತೆ ಮಧ್ಯ ಕುಳಿತ ವ್ಯಕ್ತಿಯು “ರಾಜ್ಯಪಾಲರು ಇನ್ನೂ ಕೂಡ ಹೊರಟಿಲ್ಲ. ಆಂಬುಲೆನ್ಸ್ ಅನ್ನು ಹೋಗಲು ಬಿಡಿ. ಅದರಲ್ಲಿ ನನ್ನ ಗರ್ಭಿಣಿ ಹೆಂಡತಿ ಇದ್ದಾಳೆ. ಆಕೆಗೆ ಏನಾದರೂ ಆದರೆ ಯಾರು ಹೊಣೆ? ಎಂದು ಕೇಳಿಕೊಂಡರೂ ಕೂಡ ಪೊಲೀಸರು ಆಗುವುದಿಲ್ಲ ಎಂದು ಕಡ್ಡಿ ತುಂಡಾಗುವಂತೆ ಹೇಳಿದ್ದರು. ಜನ ಅವನನ್ನು ಕಂಡು ಮಮ್ಮಲ ಮರುಗಿದ್ದರು. ಆದ್ರೆ ಇದೀಗ ಪೊಲೀಸ್ ತನಿಖೆ ವೇಳೆ ವ್ಯಕ್ತಿಯ ಹೈಡ್ರಾಮಾ ಬಯಲಾಗಿದ್ದು, ವ್ಯಕ್ತಿಯ ಕಾರ್ನಲ್ಲಿ ಆತನ ಪತ್ನಿಯೇ ಇರಲಿಲ್ಲ ಎಂದು ತಿಳಿದು ಬಂದಿದೆ.
ವಿಡಿಯೋ ವೈರಲ್ ಬೆನ್ನಲ್ಲೇ ರಸ್ತೆಯಲ್ಲಿ ಕುಳಿತು ಪತ್ರಿಭಟನೆ ನಡೆಸಿದ್ದ ಮೋಹಿತ್ನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆಗ ಆತ ಮನೆಗೆ ತುರ್ತಾಗಿ ಹೋಗಬೇಕಿದ್ದೆ.ಮನೆಯಲ್ಲಿದ್ದ ಪತ್ನಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು. ಮನೆಯಲ್ಲಿ ಗರ್ಭಿಣಿ ಪತ್ನಿ ಇರುವ ಒತ್ತಡದಲ್ಲಿದ್ದರಿಂದ ನಾನು ರಸ್ತೆಯಲ್ಲಿ ಕುಳಿತು ಪತ್ರಿಭಟನೆ ನಡೆಸಿದೆ. ಪೊಲೀಸರ ಮೇಲೆ ವೈಯುಕ್ತಿಕ ಟಾರ್ಗೆಟ್ ಇಲ್ಲ ಎಂದು ಹೇಳಿಕೆ ದಾಖಲಿಸಿದ್ದಾನೆ. ಸದ್ಯ ಪ್ರಕರಣ ದಾಖಲಿಸದೆ ಹೇಳಿಕೆ ದಾಖಲಿಸಿಕೊಂಡು ಮೋಹಿತ್ನನ್ನು ಪೊಲೀಸರು ಕಳುಹಿಸಿದ್ದಾರೆ.

