Home » ಸಂಬಳದ ಅರ್ಧದಷ್ಟು ಖರ್ಚಾದರೂ ಜನ ಬೆಂಗಳೂರು ಬಿಟ್ಟು ಹೋಗಲ್ಲ ಯಾಕೆ? ಕಾರಣ ಕೊಟ್ಟ ಬಿಹಾರಿ ಯುವಕನ ವಿಡಿಯೋ ವೈರಲ್

ಸಂಬಳದ ಅರ್ಧದಷ್ಟು ಖರ್ಚಾದರೂ ಜನ ಬೆಂಗಳೂರು ಬಿಟ್ಟು ಹೋಗಲ್ಲ ಯಾಕೆ? ಕಾರಣ ಕೊಟ್ಟ ಬಿಹಾರಿ ಯುವಕನ ವಿಡಿಯೋ ವೈರಲ್

0 comments

ಬೆಂಗಳೂರು ಅಂದ ತಕ್ಷಣ ನೆನಪಿಗೆ ಬರುವುದೇ ಅಲ್ಲಿನ ಟ್ರಾಫಿಕ್ ಸಮಸ್ಯೆ. ನಂತರ ಅಲ್ಲಿನ ದುಬಾರಿ ಜೀವನ. ಇವೆರಡನ್ನು ನೆನೆಸಿಕೊಂಡರೆ ಎಂತವರಿಗೂ ಕೂಡ ಬೆಂಗಳೂರಿನ ಸಹವಾಸ ಬೇಡವೇ ಬೇಡ ಅನಿಸುತ್ತದೆ. ಆದರೂ ಕೂಡ ಬೆಂಗಳೂರಿನಲ್ಲಿ ಇರುವವರಿಗೆ ತಿಂಗಳಿಗೆ ಸಂಬಳದ ಅರ್ಧದಷ್ಟು ಖರ್ಚಾದರೂ, ಯಂತ್ರಗಳ ನಡುವೆ ಬದುಕುವಂತಹ ಸ್ಥಿತಿ ಇದು ರಾತ್ರಿ, ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತರು ಈ ಬೆಂಗಳೂರನ್ನು ಬಿಟ್ಟು ಹೋಗಬೇಕು ಎಂದು ಮನಸ್ಸು ಬರುವುದಿಲ್ಲ. ಇದು ಯಾಕೆ ಎಂಬುದು ಹಲವರ ಪ್ರಶ್ನೆ. ಈ ಪ್ರಶ್ನೆಗೆ ಬಿಹಾರಿ ಯುವಕ ಉತ್ತರವನ್ನು ನೀಡಿದ್ದು ಎಲ್ಲರ ಗಮನ ಸೆಳೆದಿದೆ.

ಹೌದು, ಬಿಹಾರದ ವ್ಯಕ್ತಿಯೊಬ್ಬರು ಅನುಭವ ಶೇರ್ ಮಾಡಿದ್ದು ದೈನಂದಿನ ಸಮಸ್ಯೆಗಳ ಹೊರತಾಗಿಯೂ ಬೆಂಗಳೂರು ಜನರನ್ನು ಏಕೆ ಹಿಡಿದಿಟ್ಟುಕೊಳ್ಳುತ್ತದೆ ಎಂಬುದರ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಅಂಕಿತಾ ಎಂಬುವವರು ಹಂಚಿಕೊಂಡಿರುವ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದ್ದು ಹೆಚ್ಚಿನವರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

ವೈರಲ್ ಆದ ವಿಡಿಯೋದಲ್ಲಿ ಇದು ಬೆಂಗಳೂರು, ಜನರು ಇಲ್ಲಿಗೆ ಬರುತ್ತಾರೆ, ಆದರೆ ಬಂದ ನಂತರ ಅವರು ಈ ಸ್ಥಳವನ್ನು ಬಿಡಲು ಬಯಸುವುದಿಲ್ಲ. ಅವರು ಒಂಟಿತನವನ್ನು ಅನುಭವಿಸುತ್ತಿದ್ದರೂ, ಆತಂಕವನ್ನು ಅನುಭವಿ ಸುತ್ತಿದ್ದರೂ, ಅವರು ಟ್ರಾಫಿಕ್ ಅನ್ನು ಎದುರಿಸಬೇಕಾಗಿದ್ದರೂ ಸಹ, ಅವರು ಇನ್ನೂ ಇಲ್ಲಿಯೇ ಇರಲು ಬಯಸುತ್ತಾರೆ. ನಮ್ಮ ಸಂಬಳದ ಅರ್ಧಕ್ಕಿಂತ ಹೆಚ್ಚು ಈ ದೊಡ್ಡ ಅಪಾರ್ಟ್‌ಮೆಂಟ್‌ಗಳ ಬಾಡಿಗೆಗೆ ಹೋದರೂ ಸಹ, ಬೆಂಗಳೂರಿನ ಅದ್ಭುತ ಹವಾ ಮಾನವೂ ನಮ್ಮನ್ನು ಬೇರೆಲ್ಲೂ ಹೋಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಅಲ್ಲದೆ ಭಾರತದಾದ್ಯಂತ ಅನೇಕ ಪ್ರಮುಖ ನಗರಗಳಲ್ಲಿ ಉದ್ಯೋಗಾವ ಕಾಶಗಳು ಇದ್ದರೂ, ಬೆಂಗಳೂರಿನ ಆಹ್ಲಾದಕರ ವಾತಾವರಣ ಅನೇಕ ಜನರನ್ನು ಹೊರಹೋಗದಂತೆ ಮಾಡುತ್ತದೆ ಎಂದಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

banner

ವಿಡಿಯೋ 👇

https://www.instagram.com/reel/DYqydzDRDcF/?igsh=dTFybjRicjNqZ3Zk

You may also like