Home » ಕಾರವಾರ: ಸಮುದ್ರದ ಮಧ್ಯೆ ಮುಳುಗಿದ ಬೋಟ್‌: ಸ್ಥಳೀಯ ಮೀನುಗಾರರಿಂದ 7 ಜನರ ರಕ್ಷಣೆ

ಕಾರವಾರ: ಸಮುದ್ರದ ಮಧ್ಯೆ ಮುಳುಗಿದ ಬೋಟ್‌: ಸ್ಥಳೀಯ ಮೀನುಗಾರರಿಂದ 7 ಜನರ ರಕ್ಷಣೆ

0 comments
Good News To Fisherman

ಕಾರವಾರ, ಮೇ 31: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತಾರೇಬಾಗಿಲು ಸಮೀಪದ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಬೋಟ್‌ವೊಂದು ಮುಳುಗಿದ್ದು, ಅದರಲ್ಲಿದ್ದ ಏಳು ಜನ ಮೀನುಗಾರರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.

ಅಂಕೋಲಾದ ಬೆಳಂಬಾರದಿಂದ ಮೀನುಗಾರಿಕೆಗೆ ತೆರಳಿದ್ದ ʼಶ್ರೀ ನವರತ್ನʼ ಹೆಸರಿನ ಬೋಟ್ನ ಹೊರಭಾಗಕ್ಕೆ ಹಾನಿ ಉಂಟಾದ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಮುಳುಗಲು ಆರಂಭಿಸಿದೆ. ಈ ವೇಳೆ ಬೋಟ್‌ನಲ್ಲಿದ್ದ ವೆಂಕಟೇಶ್‌ ಖಾರ್ವಿ, ನಾಗಪ್ಪ ಖಾರ್ವಿ, ಸಂದೀಪ್‌ ಖಾರ್ವಿ, ವಿಕಾಸ್‌ ಖಾರ್ವಿ, ವಿಘ್ನೇಶ್‌ ಖಾರ್ವಿ, ರಜತ್‌ ಬಾಣಾವಳಿಕರ್‌ ಹಾಗೂ ಲತೇಶ್‌ ಖಾರ್ವಿ ಸೇರಿ ಏಳು ಜನರು ನೀರುಪಾಲಾಗುವ ಭೀತಿಯಿದ್ದರು.

ಈ ವೇಳೆ ಸ್ಥಳೀಯ ಮೀನುಗಾರರಾದ ಇಕ್ಬಾಲ್‌, ಅಬ್ದುಲ್‌ ಹಾಗೂ ಗಫೂರ್‌ ಎನ್ನುವವರು ತಮ್ಮ ಬೋಟ್‌ ಮೂಲಕ ಕೂಡಲೇ ಧಾವಿಸಿ ಏಳು ಜನರನ್ನು ರಕ್ಷಣೆ ಮಾಡಿದ್ದಾರೆ. ಹೊನ್ನಾವರ ಸಿಎಸ್‌ಪಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

You may also like