ರಾಯಚೂರು: ಆಂಧ್ರಪ್ರದೇಶದ ಮಂತ್ರಾಲಯ ಬಳಿ ತುಂಗಭದ್ರಾ ನದಿಯಲ್ಲಿ ನಿನ್ನೆ ಈಜಲು ತೆರಳಿದ್ದ ಐವರು ನೀರುಪಾಲಾದ ಘಟನೆ ನಡೆದಿದ್ದು, ಮೂವರ ಮೃತದೇಹ ಪತ್ತೆಯಾಗಿದೆ. ಇನ್ನಿಬ್ಬರ ಶೋಧ ಕಾರ್ಯ ಮುಂದುವರೆದಿದೆ.


ಹೈದರಾಬಾದ್ ಮೂಲದ ತಂದೆ ಮಗನ ಮೃತ ದೇಹಗಳು ಪತ್ತೆಯಾಗಿದೆ. ತಂದೆ ಸತೀಶ್ (35), ಮಗ ಯಮನ ಚಂದ್ರ (5) ಮೃತರು. ನಿನ್ನೆ ಧನುಷ್ (23) ಮೃತದೇಹ ಪತ್ತೆಯಾಗಿತ್ತು. ಇನ್ನು ರಾಘವೇಂದ್ರ (25), ಸಂಧ್ಯಾ (23) ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಆಂಧ್ರಪ್ರದೇಶ ಎಸ್ಡಿಆರ್ಎಫ್, ಪೊಲೀಸರು, ಮೀನುಗಾರರಿಂದ ಶೋಧಕಾರ್ಯ ಮುಂದುವರಿದಿದೆ.
ಮಂತ್ರಾಲಯದಲ್ಲಿ ಸಂಬಂಧಿಕರ ಮನೆಯಲ್ಲಿ ಏರ್ಪಡಿಸಿದ್ದ ಸತ್ಯನಾರಾಯಣ ಪೂಜೆಗೆ ಬಂದಿದ್ದವರು,
