ರೈಲಿನಲ್ಲಿ ಟಿಕೆಟ್ ಬುಕ್ ಮಾಡಿಕೊಂಡು ಪ್ರಯಾಣಿಸಿದಾಗ ರೈಲಿನಲ್ಲಿ ನಮಗಾಗಿ ಸೀಟ್ ಅನ್ನು ಕಾಯ್ದಿರಿಸಲಾಗಿರುತ್ತದೆ. ಟಿಕೆಟ್ ಇದ್ದರೂ ಕೂಡ ಕೆಲವೊಮ್ಮೆ ನಮ್ಮ ಸೀಟಿನಲ್ಲಿ ಬೇರೆ ಯಾರೋ ಬಂದು ಕೂತಿರುತ್ತಾರೆ. ಅವರಿಗೆ ತಿಳಿಸಿ ಹೇಳಿದಾಗ ಅವರು ಸೀಟು ಬಿಟ್ಟು ಕೊಡುವುದು ಉಂಟು. ಆದರೂ ಕೂಡ ಕೆಲವೊಮ್ಮೆ ಕೆಲವೊಬ್ಬರು ಹಠ ಮಾಡಿ ಸೀಟು ಕೊಡುವುದಿಲ್ಲ. ಇಂಥದ್ದೇ ಒಂದು ಘಟನೆ ನಡೆದಿದ್ದು, ಟಿಕೆಟ್ ಬುಕ್ಕಾದರೂ ಸೀಟು ಇಲ್ಲದೆ ನಿಂತುಕೊಂಡು ಪ್ರಯಾಣಿಸಿದ ಪ್ರಯಾಣಿಕ ನಿಗೆ 20 ಸಾವಿರ ರೂಪಾಯಿ ಪರಿಹಾರವನ್ನು ನೀಡಿದೆ.


ಹೌದು, 2022ರ ವೇಳೆ ಉತ್ತರ ಪ್ರದೇಶದ ವಿದ್ಯಾಚಲದಿಂದ ಬಿಹಾರದ ಅರಾಗೆ ದೂರುದಾರ ಹಾಗೂ ಆತನ ಮೂವರು ಗೆಳೆಯರು ಪ್ರಯಾಣ ಮಾಡಲು ರೈಲ್ವೇ ಟಿಕೆಟ್ ಬುಕ್ ಮಾಡಿದ್ದರು. ಟಿಕೆಟ್ ಇದ್ದರೂ ರೈಲು ಹತ್ತಿದಾಗ ತನ್ನ ಸೀಟಿನಲ್ಲಿ ಹಲವರು ಕುಳಿತಿದ್ದರು. 1876 ರೂಪಾಯಿ ಪಾವತಿಸಿ ನಾಲ್ವರು ಪ್ರಯಾಣ ಮಾಡಲು ಬಂದಾಗ ತಮ್ಮ ಸೀಟಿನಲ್ಲಿ ಹಲವರು ಕುಳಿತಿದ್ದನ್ನು ಕಂಡು ಎಬ್ಬಿಸಲು ಹೋದಾಗ ತಾವು ರೈಲ್ವೇ ಸಿಬ್ಬಂದಿಗಳು ಇವತ್ತು ಕೆಲ ರೈಲ ರದ್ದಾಗಿದೆ ಅನ್ನೋ ಕತೆ ಹೇಳಿ ಗದರಿಸಿದ್ದಾರೆ. ರೈಲಿನ ಟಿಟಿಇ ಬಳಿ ದೂರು ಕೊಡಲು ಕಾದರೆ ಟಿಟಿಇ ಬರಲೇ ಇಲ್ಲ. ಇತ್ತ ಹೆಲ್ಪ್ಲೈನ್ ನಂಬರ್ಗೆ ಕರೆ ಮಾಡಿದರೆ ಕನೆಕ್ಟ್ ಆಗಲೇ ಇಲ್ಲ.
ಅಲ್ಲದೆ ನಾಲ್ವರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾ ಮೂಲಕ ರೈಲ್ವೇ ಇಲಾಖೆಯನ್ನು ಟ್ಯಾಗ್ ಮಾಡಿ ಗಮನಸೆಳೆಯುವ ಪ್ರಯತ್ನ ಮಾಡಿದ್ದಾರೆ. ಬುಕ್ಸರ್ ರೈಲು ನಿಲ್ದಾಣ ಬಂದಾಗ ಟಿಟಿಇ ಆಗಮಿಸಿದ್ದಾನೆ. ಈ ವೇಳೆ ಈ ನಾಲ್ವರು ಪ್ರಯಾಣಿಕರು ತಮ್ಮ ಸೀಟಿನಲ್ಲಿ ಬೇರೆಯವರು ಕುಳಿತುಕೊಂಡಿದ್ದಾರೆ. ಎಬ್ಬಿಸಲು ಸೂಚಿಸಿದ್ದಾರೆ. ಸೀಸನ್ ಇರೋದರರಿಂದ ಜನಸಂದಣಿ ಹೆಚ್ಚಿದೆ. ಈ ಬಾರಿ ಸ್ವಲ್ಪ ಮ್ಯಾನೇಜ್ ಮಾಡಿ ಎಂದು ಟಿಟಿಐ ಕೈತೊಳೆದುಕೊಂಡಿದ್ದಾನೆ. ನಾಲ್ವರು ಗೆಳೆಯರು ಬೋಜಪುರಿ ಜಿಲ್ಲಾ ಗ್ರಾಹಕರ ವೇದಿಕೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಇದರ ವಿಚಾರಣೆ ನಡೆದು ಇಲ್ಲಿಯವರೆಗೂ ಮುಂದೂಡಿಕೊಂಡು ಬಂದಿದೆ.
ಇದೀಗ ಕೋರ್ಟ್ ರೈಲ್ವೆ ಇಲಾಖೆಗೆ ಪ್ರಯಾಣಿಕ ನಿಗೆ ಪರಿಹಾರ ನೀಡುವಂತೆ ಆದೇಶಿಸಿದೆ. ಅಂತೆಯೇ ಬೇರೆ ದಾರಿಯಿಲ್ಲದೆ ನಿಂತುಕೊಡೆ ಪ್ರಯಾಣಿಸಿದ ಪ್ರಯಾಣಿಕನಿಗೆ ಇದೀಗ ಭಾರತೀಯ ರೈಲ್ವೇ 20 ಸಾವಿರ ರೂಪಾಯಿ ಪರಿಹಾರ ನೀಡಲು ಆದೇಶಿಸಿದೆ.

