3
ಕಾಸರಗೋಡು: ಉದ್ಯೋಗದ ನಿಮಿತ್ತ ವಿದೇಶಕ್ಕೆ ತೆರಳಲು ಸಜ್ಜಾಗಿದ್ದ ದಾದಿ ವೃತ್ತಿಯ ಕೇರಳ ಆಲಪ್ಪುಯ ಜಿಲ್ಲೆಯ ಅಂಬಲಪ್ಪುಯ ವಡಕ್ಕೆ ನಿವಾಸಿ ಆರ್ಯಾ ಮೋಳ್ (26) ಶುಕ್ರವಾರ ಅಮೀಬಿಕ್ ಮಿದುಳು ಜ್ವರದಿಂದ ಮೃತಪಟ್ಟಿದ್ದಾರೆ.


ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾದಿಯಾಗಿ ಕೆಲಸ ಮಾಡುತ್ತಿದ್ದ ಇವರು ಉದ್ಯೋಗ ಪ್ರಯುಕ್ತ ವಿದೇಶಕ್ಕೆ ತೆರಳಲು ಎರಡು ತಿಂಗಳ ಹಿಂದೆ ಊರಿಗೆ ತಲುಪಿದ್ದರು. ಆದರೆ ರೋಗ ಲಕ್ಷಣಗಳು ಕಾಣಿಸಿಕೊಂಡು ಚಿಕಿತ್ಸೆಯಲ್ಲಿದ್ದರು.
