ರವಿ ಬೆಳಗೆರೆ (Ravi Belegere) ಒಬ್ಬ ಪತ್ರಿಕಾ ಲೋಕದ ಮಹಾ ಪಾತಕಿ. ಅವರು ಎಲ್ಲರನ್ನು ಹೀಯಾಳಿಸಿ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಅದರಲ್ಲೂ ಮಹಿಳೆಯರನ್ನು ಲೇಖನಗಳಲ್ಲಿ ಕೀಳಾಗಿ ಉಲ್ಲೇಖಿಸುತ್ತಿದ್ದರು. ಹಾಯ್ ಬೆಂಗಳೂರ’ಲ್ಲಿ ನಟಿಯರ, ಹೆಣ್ಣು ಮಕ್ಕಳ ಚಾರಿತ್ರ್ಯಹರಣ ಮಾಡುತ್ತಿದ್ದರು ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.


ಇತ್ತೀಚಿಗೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಸಾಧನಾ ಸೌರಭ ಕಾರ್ಯಕ್ರಮ ಆಯೋಜಿಸಿ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ (Vishweshwar Bhat) ಅವರಿಗೆ ರಾಷ್ಟ್ರೀಯ ಸೌರಭ ಸಮ್ಮಾನ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಾಪ್ ಸಿಂಹ ಮಾತನಾಡಿ ಹಿರಿಯ ಪತ್ರಕರ್ತ, ದಿ. ರವಿಬೆಳಗೆರೆ ಬಗ್ಗೆ ಆಕ್ರೋಶ ಹೊರ ಹಾಕಿದರು.
ಅಲ್ಲದೆ ʼʼರವಿ ಬೆಳಗೆರೆ ʼಹಾಯ್ ಬೆಂಗಳೂರುʼ ಪತ್ರಿಕೆಯಲ್ಲಿವೈಯಕ್ತಿಕವಾಗಿ ಮಾನ ಹಾನಿ ಮಾಡಿ ಲೇಖನ ಬರೆಯುತ್ತಿದ್ದರು. ಅದರಲ್ಲೂ ಯಾವುದಾದರೂ ಒಬ್ಬ ಹೆಣ್ಣು ಮಗಳ ಬಗ್ಗೆ ಕೀಳಾಗಿ ಬೈದು ಪತ್ರಿಕೆ ಮಾರಾಟ ಮಾಡುತ್ತಿದ್ದರು. ಅವರ ಪತ್ರಿಕೆಯಲ್ಲಿ ಒಳ್ಳೆಯ ವಿಚಾರಗಳು ಇರಲೇ ಇಲ್ಲ. ಮತಾಂತರದ ಕುರಿತು ನಡೆದ ಚರ್ಚೆಯ ವೇಳೆ, ಹಿರಿಯ ಸಾಹಿತಿ ಎಸ್. ಎಲ್. ಭೈರಪ್ಪ ಅವರ ಬಗ್ಗೆಯೂ ಅತೀ ಕೆಟ್ಟ ಶಬ್ದಗಳನ್ನು ಬಳಸಿ ಬರೆದಿದ್ದರು. ಎಡಪಂಥೀಯ ಅವರಿಗಿಂತಲೂ ಕೆಟ್ಟದಾಗಿ ಭೈರಪ್ಪ ಅವರನ್ನು ನಿಂದಿಸಿದ್ದು ಎಲ್ಲರಿಗೂ ಅಸಮಾಧಾನ ಉಂಟು ಮಾಡಿತ್ತುʼʼ ಎಂದರು.
