Kerala: ವಿಷು ಹಬ್ಬದ ಶುಭಾಶಯದ ಜಾಹೀರಾತಿನಲ್ಲಿ ರೆಸ್ಟೋರೆಂಟ್ ಮಾಲೀಕನೊಬ್ಬ ಶ್ರೀಕೃಷ್ಣನ ಚಿತ್ರದೆದುರು ಮಾಂಸಾಹಾರಿ ಖಾದ್ಯ ಚಿತ್ರವನ್ನು ಬಳಸಿದ ಆರೋಪದ ಮೇಲೆ ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.


ಕೇರಳದ ಚೆರ್ತಲಾದ ‘ಮೆಹರ್ ಮಂಡಿ & ಗ್ರಿಲ್ಸ್’ ಎಂಬ ರೆಸ್ಟೋರೆಂಟ್ನ ಪಾಲುದಾರರಾದ ಅರ್ಷದ್ (36) ಮತ್ತು ಶಮ್ನಾಸ್ (30) ಬಂಧಿತರು. ಏಪ್ರಿಲ್ 15ರ ವಿಷು ಹಬ್ಬದಂದು ರೆಸ್ಟೋರೆಂಟ್ ವತಿಯಿಂದ ಆನ್ಲೈನ್ನಲ್ಲಿ ಹಂಚಿಕೊಳ್ಳಲಾದ ಪೋಸ್ಟರ್ನಲ್ಲಿ, ಶ್ರೀಕೃಷ್ಣನ ವಿಗ್ರಹದ ಮುಂದೆ ಮಾಂಸದೂಟವನ್ನು ಇರಿಸಲಾದ ಚಿತ್ರವಿತ್ತು. ಇದು ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ದಿನಿ ಎಪಿ ಎಂಬುವವರು ದೂರು ದಾಖಲಿಸಿದ್ದರು
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 192ರ ಅಡಿಯಲ್ಲಿ ಗಲಭೆ ಉಂಟುಮಾಡುವ ಉದ್ದೇಶದ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ. ವಿವಾದ ತಾರಕಕ್ಕೇರುತ್ತಿದ್ದಂತೆ ರೆಸ್ಟೋರೆಂಟ್ನ ಮತ್ತೊಬ್ಬ ಪಾಲುದಾರ ಶಮೀರ್ ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆಯಾಚಿಸಿದ್ದಾರೆ.
