Home » ಶಾಸಕ ಹರೀಶ್ ಪೂಂಜರಿಂದ ಪಿಲಿಚಾಮುಂಡಿಕಲ್ಲು-ಶಕ್ತಿನಗರ ರಸ್ತೆ ಡಾಮರೀಕರಣಕ್ಕೆ ಶಿಲಾನ್ಯಾಸ: ಬದ್ಧತೆಯ ಜನಪ್ರತಿನಿಧಿನಗಳಿಂದ ಅಭಿವೃದ್ಧಿ ಸಾಧ್ಯ: ಹರೀಶ್ ಪೂಂಜ

ಶಾಸಕ ಹರೀಶ್ ಪೂಂಜರಿಂದ ಪಿಲಿಚಾಮುಂಡಿಕಲ್ಲು-ಶಕ್ತಿನಗರ ರಸ್ತೆ ಡಾಮರೀಕರಣಕ್ಕೆ ಶಿಲಾನ್ಯಾಸ: ಬದ್ಧತೆಯ ಜನಪ್ರತಿನಿಧಿನಗಳಿಂದ ಅಭಿವೃದ್ಧಿ ಸಾಧ್ಯ: ಹರೀಶ್ ಪೂಂಜ

0 comments

ಬೆಳ್ತಂಗಡಿ: ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಿಲಿಚಾಮುಂಡಿಕಲ್ಲು-ಶಕ್ತಿನಗರ ರಸ್ತೆ ಡಾಮರೀಕರಣಕ್ಕೆ ಶಾಸಕ ಹರೀಶ್ ಪೂಂಜ ಅವರು ಎ.೮ ರಂದು ಶಿಲಾನ್ಯಾಸ ನೇರವೇರಿಸಿದರು.

ಬಳಿಕ ಮಾತನಾಡಿದ ಅವರು ರಾಜ್ಯ ಸರ್ಕಾರ ಅಭಿವೃದ್ಧಿಗೆ ಪೂರಕವಾದ ಅನುದಾನ ಒದಗಿಸುತ್ತಿಲ್ಲ. ಬದ್ಧತೆಯ ಜನಪ್ರತಿನಿದಿನಗಳಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಅಭಿವೃದ್ಧಿಯಲ್ಲಿ ರಾಜಕೀಯ ಜಾತಿ, ಮತ, ಭೇದ ಇಲ್ಲ. ಶೀಘ್ರವೇ ರಸ್ತೆ ಕಾಮಗಾರಿ ಆರಂಭಗೊಳ್ಳುವುದು ಆಗಾಗಿ ಮೊಗೆರೋಡಿ ಕನ್‌ಸ್ಟcಕ್ಷನ್ ನವರು ಗುತ್ತಿಗೆ ವಹಿಸಿಕೊಂಡಿದ್ದಾರೆ ಕಾಮಗಾರಿ ನಡೆಯುವ ವೇಳೆ ನಾಗರೀಕರ ಸಹಕಾರ ಇರಲಿ. ನಮ್ಮ ಸರಕಾರ ಅಧಿಕಾರ ಬಂದಾಗ ಈ ರಸ್ತೆಯನ್ನು ೫.೪ ಮೀಟರ್ ರಸ್ತೆಯಾಗಿ ಪರಿವರ್ತಿಸಿ ಕಾಂಕ್ರೀಟ್ ರಸ್ತೆಯಾಗಿ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ರಾಜೇಶ್ ಶೆಟ್ಟಿ ನವಶಕ್ತಿ, ಶಶಿರಾಜ್ ಶೆಟ್ಟಿ, ಸುರೇಶ ಕುಮಾರ್ ಕಂಡಬು, ಪ್ರವೀಣ್ ಕುಮಾ‌ರ್ ಅಜ್ರ ಪಾಡ್ಯಾರಬೀಡು, ಗಣೇಶ್ ಕೆ., ಪ್ರದೀಪ್ ಶೆಟ್ಟಿ, ರಚನಾ ಕೆ, ಹನಿಯಬ್ಬ, ಮಂಜುನಾಥ್ ಕುಂಬಳೆ, ಚಂದ್ರಹಾಸ್ ದಾಸ್, ಸುನೀಶ್ ಕೆ. ಕಂಡAಬು, ವಿಠಲ ಆಚಾರ್ಯ ಸಹಿತ ಮತ್ತಿತರರು ಉಪಸ್ಥಿತರಿದ್ದರು.

ಸುಧಾಮಾಣಿ ಆ‌ರ್ ನಿರೂಪಿಸಿದರು.

banner

You may also like