Mudigere : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಈಗ ಅನ್ಯಕೋಮಿನ ಅಪ್ರಾಪ್ತ ಪ್ರೇಮಿಗಳ ಪ್ರಕರಣವೊಂದು ಭಾರೀ ಸದ್ದು ಮಾಡುತ್ತಿದ್ದು, ‘ಲವ್ ಜಿಹಾದ್’ ಆರೋಪ ಕೇಳಿಬಂದಿತ್ತು. ಅಲ್ಲದೆ ಹಲ್ಲೆ ಹಾಗೂ ಪೋಕ್ಸೋ ಕಾಯ್ದೆಯಡಿ ದೂರು-ಪ್ರತಿದೂರುಗಳು ಆಗಿದ್ದವು. ಆದರೆ ಇದೀಗ SSLC ಹುಡುಗನನ್ನ ಪ್ರೀತಿಸುತ್ತಿದ್ದ PUC ವಿದ್ಯಾರ್ಥಿನಿ ಆತ ಹೇಳಿದ ಎಂದು ದೇವಸ್ಥಾನಕ್ಕೂ ಹೋಗದೇ ಮನೆಯಲ್ಲೇ ಉಪವಾಸವಿದ್ದು ರಂಜಾನ್ ಆಚರಿಸಿ, ನಮಾಜ್ ಮಾಡುತ್ತಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಮೂಡಿಗೆರೆ ತಾಲೂಕಿನ ಬಿಳಗೊಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದೇ ನಿವಾಸಿಗಳಾದ ಪಿಯುಸಿ ವ್ಯಾಸಂಗ ಮಾಡುತ್ತಿರುವ ಹಿಂದೂ ಮುದಾಯದ ಹುಡುಗಿ ಮತ್ತು ಎಸ್ ಎಸ್ ಎಲ್ ಸಿ ಓದುತ್ತಿರುವ ಮುಸ್ಲಿಂ ಸಮುದಾಯದ ಹುಡುಗ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.
ಈ ವಿಚಾರ ಹೊರಬಿದ್ದ ನಂತರ, ‘ಲವ್ ಜಿಹಾದ್’ ಆರೋಪ ಕೇಳಿ ಬಂದಿತ್ತು. ಇದೇ ವಿಚಾರವಾಗಿ ಕಳೆದ ಎರಡು ಮೂರು ದಿನಗಳ ಹಿಂದೆ ಮೂಡಿಗೆರೆ ಠಾಣೆಯಲ್ಲಿ ದೂರಿಗೆ ಪ್ರತಿ ದೂರು ದಾಖಲಾಗಿತ್ತು. ಹುಡುಗ ಹಿಂದೂ ಸಂಘಟನೆ ಕಾರ್ಯಕರ್ತರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದ. ಬಾಲಕಿ ಪೋಷಕರು ಮುಸ್ಲಿಂ ಹುಡುಗನ ವಿರುದ್ಧ ಪೋಕ್ಸೊ ಕೇಸ್ ದಾಖಲಿಸಿದ್ದರು. ಆದರೆ, ಈಗ ಹುಡುಗಿಯ ಪೋಷಕರು ತಮ್ಮ ಮಗಳ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ.
ಕೆಲವು ಹಿಂದೂ ಸಂಘಟನೆ ಕಾರ್ಯಕರ್ತರು ಅಪ್ರಾಪ್ತ ಯುವಕನ ವಿದ್ಯಾರ್ಥಿನಿ ಪ್ರಿಯಕರ ಹೇಳಿದ ಎಂದು ಮನೆಯಲ್ಲಿ ಒಂದು ತಿಂಗಳು ರಂಜಾನ್ ವೇಳೆ ಉಪವಾಸ ಮಾಡಿದ್ದಾಳೆ. ಪ್ರತಿದಿನ ಮನೆಯಲ್ಲಿ ನಮಾಜ್ ಮಾಡುತ್ತಿದ್ದಳು. ಪೋಷಕರು ದೇವಸ್ಥಾನಕ್ಕೆ ಕರೆದರೆ ಹೋಗದೆ ಮನೆಯಲ್ಲಿ ನಮಾಜ್ ಮಾಡುತ್ತಿದ್ದಳು. ಬಾಲಕಿಗೆ ಆತ ಮದುವೆಗೂ ಮುನ್ನವೇ ಮತಾಂತರವಾಗಬೇಕು ಎಂದು ತಾಕೀತು ಮಾಡಿದ್ದ. ನಾನು ಹೇಳಿದಂತೆ ನೀನು ಕೇಳಬೇಕು ಇಲ್ಲವಾದರೆ ನಿನ್ನ ತಂದೆ ತಾಯಿಯನ್ನು ಕೊಲೆ ಮಾಡುತ್ತೇನೆ ಎಂದು ಬಾಲಕಿಗೆ ಹೆದರಿಸಿದ್ದನಂತೆ. ಬಾಲಕಿ ತಂದೆ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಆಕೆಗೆ ಸ್ವಲ್ಪ ಬುದ್ಧಿ ಹೇಳಿ ಎಂದು ಎಲ್ಲಾ ವಿಚಾರವನ್ನು ಸಂಘಟನೆಯವರ ಬಳಿ ಹೇಳಿಕೊಂಡಿದ್ದಾರೆ. ಇದು ಹಿಂದೂ ಸಮಾಜದವರು ಯೋಚಿಸುವ ವಿಚಾರವಾಗಿದೆ.

