ಸುಮಾರು 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಸಾರಿಗೆ ಬೋಟ್ ಏರುವ ಸಂದರ್ಭದಲ್ಲಿ ನದಿಗೆ ಉರುಳಿಬಿದ್ದ ಘಟನೆ ನಡೆದಿದೆ. ಪರಿಣಾಮ 23 ಜನರು ಸಾವಿಗೀಡಾಗಿರುವ ಘಟನೆ ಬಾಂಗ್ಲಾದೇಶದ ರಾಜಧಾನಿಯಲ್ಲಿ ನಡೆದಿದೆ.

ಬುಧವಾರ ಸಂಜೆ 5.15 ಗಂಟೆ ಸುಮಾರಿಗೆ ನೈರುತ್ಯ ಜಿಲ್ಲೆ ರಾಜ್ಬರಿಯಿಂದ ಪ್ರಯಾಣ ಮಾಡುತ್ತಿದ್ದ ಬಸ್ ಸಾರಿಗೆ ಬೋಟ್ ಏರುವಾಗ ಈ ದುರ್ಘಟನೆ ನಡೆದಿದೆ. ಹಲವು ಪ್ರಯಾಣಿಕರು ಬಸ್ ಕಿಟಕಿಯಿಂದ ತಪ್ಪಿಸುವಲ್ಲಿ ಯಶಸ್ವಿಯಾದರೆ, ಬಹುತೇಕರು ಒಳಗಡೆಯೇ ಲಾಕ್ ಆಗಿ ಸಾವಿಗೀಡಾಗಿದ್ದಾರೆ. ಇನ್ನು ಹಲವು ಮಂದಿ ನಾಪತ್ತೆಯಾಗಿದ್ದಾರೆ.
ಘಟನೆ ನಂತರ ಸಾಲ್ವೆಜ್ ಬೋಟ್ನಲ್ಲಿದ್ದ ಕ್ರೇನ್ಗಳನ್ನು ಬಳಸಿಕೊಂಡು ಬಸ್ ಅನ್ನು ಹೊರಗಡೆ ತೆಗೆಯಲಾಯಿತು. ನಂತರ ರಾತ್ರಿ ಕಾರ್ಯಾಚರಣೆ ನಿಲ್ಲಿಸಲಾಯಿತು. ಇಂದು ಗುರುವಾರ ಮತ್ತೆ ಕಾರ್ಯಾಚರಣೆ ನಡೆಯಲಿದೆ. ಅಗ್ನಿಶಾಮಕ ಸೇವೆ, ನೌಕಾಪಡೆ, ಪೊಲೀಸ್ ಮತ್ತು ಇತರ ರಕ್ಷಣಾ ತಂಡಗಳು ಸ್ಥಳದಲ್ಲೇ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
https://x.com/ANI/status/2036948748706996683/photo/1

