Home » Bengaluru : ಕಾಲೇಜು ಮುಗಿಸಿ ಹೊರ ಬರುತ್ತಿದ್ದಂತೆ MBBS ವಿದ್ಯಾರ್ಥಿನಿ ದುರಂತ ಸಾವು!!

Bengaluru : ಕಾಲೇಜು ಮುಗಿಸಿ ಹೊರ ಬರುತ್ತಿದ್ದಂತೆ MBBS ವಿದ್ಯಾರ್ಥಿನಿ ದುರಂತ ಸಾವು!!

0 comments

Bengaluru : ಎಂಬಿಬಿಎಸ್ ವಿದ್ಯಾರ್ಥಿ ನಿ ಒಬ್ಬಳು ಕಾಲೇಜು ಮುಗಿಸಿ ಹೊರ ಬರುತ್ತಿದ್ದಂತೆ ದುರಂತವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಾರಣ ಆಕೆ ಕಾಲೇಜು ಗೇಟ್ ನಿಂದ ಹೊರಗಡೆ ಕಾಲಿಡುತ್ತಿದ್ದಂತೆ ಟಿಪ್ಪರ್ ಲಾರಿ ಒಂದು ಆಕೆಯ ಮೇಲೆ ಹರಿದಿದೆ.

 ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನ (Rajarajeswari Medical College) ಮುಂಭಾಗದಲ್ಲಿ ಈ ಧಾರುಣ ಘಟನೆ ನಡೆದಿದೆ. ಮೃತಳನ್ನು ಕೃತಿಕಾ (21) ಎಂದು ಗುರುತಿಸಲಾಗಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಹಂಸ (21) ಗಂಭೀರವಾಗಿ ಗಾಯಗೊಂಡಿದ್ದಾರೆ. 

ಇಬ್ಬರು ಎಂಬಿಬಿಎಸ್ ಓದುತ್ತಿದ್ದರು ಎಂದು ತಿಳಿದುಬಂದಿದೆ. ಕಾಲೇಜು ಸಮಯ ಮುಗಿಯುತಿದ್ದಂತೆ ಇಬ್ಬರು ಆಕ್ಟೀವಾದಲ್ಲಿ ಕಾಲೇಜು ಮುಗಿಸಿ ಗೇಟ್ ಹೊರಗೆ ಬಂದಿದ್ದರು. ಈ ವೇಳೆ ಅತಿವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಕೃತಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಂಸ ಗಾಯಗೊಂಡಿದ್ದಾರೆ. ಅವರನ್ನು ಆರ್‌ಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

You may also like