

Mangaluru : ಮಂಗಳೂರು ಮೂಲದ ಉದ್ಯಮಿಯೊಬ್ಬರು ತನ್ನ ಹೆಂಡತಿಯ ಸೀಮಂತ ಕಾರ್ಯಕ್ರಮಕ್ಕೆ ಕೆಜಿಎಫ್ ಸಿನಿಮಾ ಸ್ಟೈಲ್ ನಲ್ಲಿ ಹೆಲಿಕ್ಯಾಪ್ಟರ್ ಮೂಲಕ ಹೂ ಮಳೆ ಸುರಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಮಂಗಳೂರಿನ ಅಡ್ಯಾರ್ ಗಾರ್ಡನ್ನಲ್ಲಿ ಉದ್ಯಮಿ ಪ್ರಕಾಶ್ ಕುಂಪಲ ಎಂಬವರ ಪತ್ನಿ ಅರ್ಪಿತಾ ಅವರ ಸೀಮಂತ ಕಾರ್ಯಕ್ರಮ ನೆರವೇರಿದ್ದು, ಪತ್ನಿಯ ಸೀಮಂತಕ್ಕೆ ಉದ್ಯಮಿ ಪ್ರಕಾಶ್ ಅವರು ಹೆಲಿಕಾಪ್ಟರ್ ಮೂಲಕ ಹೂವಿನ ಸುರಿಮಳೆಗೈದು ಪತ್ನಿಗೆ ಸರ್ಪ್ರೈಸ್ ನೀಡಿದ್ದಾರೆ. ಇದು ಮಂಗಳೂರಲ್ಲಿ ಮೊಟ್ಟ ಮೊದಲ ಬಾರಿಗೆ ಪತಿಯೋರ್ವ ಪತ್ನಿ ಸೀಮಂತಕ್ಕೆ ಹೆಲಿಕಾಪ್ಟರ್ ಮೂಲಕ ಪತ್ನಿಗೆ ಉಡುಗೊರೆ ನೀಡಿದಂತಾಗಿದ್ದು, ದೊಡ್ಡ ಸುದ್ದಿಯಾಗಿದೆ.
ಸೀಮಂತದ ಶಾಸ್ತ್ರಗಳು ನಡೆದ ಬಳಿಕ ಆಗಸದಲ್ಲಿ ದಿಢೀರ್ ಹೆಲಿಕಾಪ್ಟರ್ ಕಾಣಿಸಿಕೊಂಡಿತು. ನೋಡುತ್ತಿದ್ದಂತೆಯೇ ಆ ಹೆಲಿಕಾಪ್ಟರ್ನಿಂದ ಅರ್ಪಿತಾ ಅವರ ಮೇಲೆ ಹೂಮಳೆ ಸುರಿಸಲಾಯಿತು. ‘ಅರ್ಪಿತಾ ಅವರಿಗಾಗಲೀ ಬಂಧುಗಳಿಗಾಗಲಿ ಈ ವಿಚಾರ ಮೊದಲು ಗೊತ್ತೇ ಇರಲಿಲ್ಲ. ಪತಿ ನೀಡಿದ ಅಚ್ಚರಿಯ ಉಡುಗೊರೆಯಿಂದ ಅರ್ಪಿತಾ ಮಾತ್ರವಲ್ಲ ಸಮಾರಂಭಕ್ಕೆ ಬಂದವರೂ ಸಂಭ್ರಮಪಟ್ಟಿದ್ದಾರೆ.