

ಸುಳ್ಯ: ಹಲ್ಲೆ ಮಾಡಿ ಬೆದರಿಕೆಯೊಡ್ಡಿದ್ದಾರೆ ಎಂದು ಪ್ರವೀಣ ಎನ್ನುವವರು ಸುಳ್ಯ ಠಾಣೆಗೆ ನೀಡಿದ ದೂರಿಗೆ ಸಂಬಂಧಿಸಿದಂತೆ ಪ್ರತಿದೂರು ದಾಖಲಾಗಿದೆ.
ಜಾಲ್ಸೂರಿನ ಮಾಧವ (35) ಎಂಬುವವರು ದೂರು ನೀಡಿದ ವ್ಯಕ್ತಿ. ಮಾಧವ ಅವರು ಭೂತಕಟ್ಟುವ ವೃತ್ತಿ ಮಾಡಿಕೊಂಡಿದ್ದು, ಫೆ.15 ರಂದು ಸುಳ್ಯದ ಓಡಭಾಯಿ ಲಿಕ್ವಿಡ್ ಕಾಂಟಿನೆಂಟ್ ಬಾರ್ಗೆ ಗೆಳೆಯ ಭರತ್ ಎನ್ನುವಾತನನ್ನು ನೋಡಲು ಬಂದಿದ್ದು, ಆತನ ಜೊತೆ ಮಾತಾಡಿ ಬಾರ್ ಹೊರಗಡೆ ಅವರ ಪರಿಚಯದ ಪ್ರವೀಣ ಎಂಬಾತನು ಮರದ ರೀಪ್ ತುಂಡಿನಿಂದ ಬೆನ್ನಿಗೆ ಹೊಡೆದಿದ್ದು, ಈ ವೇಳೆ ಮಾಧವರ ದೊಡ್ಡಪ್ಪನ ಮಗ ವೆಂಕಪ್ಪ ಎನ್ನುವವರು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಪ್ರವೀಣ ಆತನ ಕೈಯಲ್ಲಿದ್ದ ಕತ್ತಿಯಿಂದ ಬಲಕಾಲಿಗೆ, ಬಲಕೈ ಹಾಗೂ ಎಡಗೈ ಹೆಬ್ಬೆರಳಿಗೆ ಕತ್ತಿಯಿಂದ ಕಡಿದಿದ್ದು, ಎಡಮೊಣಕಾಲಿಗೆ ರಕ್ತಗಾಯವಾಗಿದ್ದು ಮಾಧವರಿಗೆ ಹಾಗೂ ಅವರ ದೊಡ್ಡಪ್ಪನ ಮಗನಾದ ವೆಂಕಪ್ಪ ಅವರಿಗೆ ಭೂತಕಟ್ಟುವ ವಿಚಾರದಲ್ಲಿ ಭಿನ್ನಭಿಪ್ರಾಯವಾಗಿ ಪ್ರವೀಣ, ವೆಂಕಪ್ಪ ಅವರ ಜೊತೆ ಗಲಾಟೆಯಾಗಿದ್ದು, ಈ ವಿಚಾರದಲ್ಲಿ ವೈಮನಸ್ಸಿನಿಂದ ವೆಂಕಪ್ಪ ಹಾಗೂ ಪ್ರವೀಣ ಅವರು ಮರದ ರೀಪ್ ಹಾಗೂ ಕತ್ತಿಯಿಂದ ಹಲ್ಲೆ ಮಾಡಿ, ನಂತರ ಅಲ್ಲಿಂದ ಹೋಗುತ್ತಾ ಪ್ರವೀಣನು ಮಾಧವರನ್ನುದ್ದೇಶಿಸಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿದ್ದಾಗಿ ಆರೋಪ ಮಡಲಾಗಿದೆ.
ಮಾಧವ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.