

Bengaluru : ಒಡವೆಗಳನ್ನು ಕಳ್ಳತನ ಮಾಡಿದರೆ ಅಥವಾ ಏನಾದರೂ ಬೆಲೆಬಾಳುವ ಪದಾರ್ಥಗಳನ್ನು ಕದ್ದರೆ, ಇತರರಿಗೆ ಮೋಸ ಮಾಡಿದರೆ ಕಳ್ಳತನದ ಪ್ರಕರಣಗಳು ದಾಖಲಾಗುವುದು ಸಾಮಾನ್ಯ. ಇತ್ತೀಚಿನ ದಿನಗಳಲ್ಲಿ ನಾಯಿಗಳನ್ನು ಕದ್ದರು ಕಳ್ಳತನದ ಕೆ ಎಸ್ ದಾಖಲಾಗುತ್ತಿದೆ. ಆದರೆ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಬೆಂಗಳೂರಿನಲ್ಲಿ ಗರ್ಭಿಣಿ ಬೆಕ್ಕನ್ನು ಕದ್ದದ್ದಾಕ್ಕಾಗಿ 9 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಹೌದು, ಪ್ರಾಣಿ ಪ್ರಿಯ ಹರೀಶ್ ಎಂಬುವವರು ಅಪಾರ್ಟ್ಮೆಂಟ್ ಸಿಬ್ಬಂದಿ ಸ್ಥಳಾಂತರ ಮಾಡಿದ್ದಾರೆ ಎಂದು ಆರೋಪಿಸಿ ವನಶ್ರೀ ಅಪಾರ್ಟ್ಮೆಂಟ್ನ ಅಧ್ಯಕ್ಷ ಶ್ರೀರಾಂ, ಸೆಕ್ಯುರಿಟಿ ಮ್ಯಾನೇಜರ್ ಸೇರಿ 9 ಜನರ ವಿರುದ್ಧ ಗರ್ಭಿಣಿ ಬೆಕ್ಕಿನ ಕಳ್ಳತನದ ಆರೋಪ ಮೇಲೆ ಎಚ್ ಎ ಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ.
ಸದ್ಯ ಹರೀಶ್ ನೀಡಿರುವ ದೂರಿನನ್ವಯ ಪೊಲೀಸರು ‘ಪ್ರಾಣಿ ದೌರ್ಜನ್ಯ ತಡೆ ಕಾಯ್ದೆ’ಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಇನ್ನೂ,ಯಾತಕ್ಕಾಗಿ ಈ ಬೆಕ್ಕನ್ನ ಅಪಹರಣ ಮಾಡಲಾಗಿದೆ ಅಂತಾ ಆರೋಪಿಗಳನ್ನ ವಿಚಾರಣೆ ನಡೆಸಿದ್ದಾಗಲೇ ಕಾರಣ ತಿಳಿಯ ಬೇಕಿದೆ..













