

ಉತ್ತರಪ್ರದೇಶದ ಜಿಲ್ಲೆಯಲ್ಲಿ 37 ವರ್ಷದ ಘಾಸಿ ರಾಮ್ ಎನ್ನುವ ವ್ಯಕ್ತಿ ತನ್ನ ಹೆಂಡತಿಯಿಂದ ದೀರ್ಘಕಾಲ ಲೈಂಗಿಕ ಸಂಭೋಗ ಪಡೆಯದ ಕಾರಣ ಹತಾಶೆಯಿಂದ ಆತ್ಮಹತ್ಯೆ ಮಾಡುವ ನಿರ್ಧಾರ ತೆಗೆದುಕೊಂಡಿರುವ ಘಟನೆ ನಡೆದಿದೆ. ಈತ ಕುಡಿತದ ಮತ್ತಿನಲ್ಲಿ ತನ್ನ ಹೆಂಡತಿಯೊಂದಿಗೆ ಜಗಳವಾಡಿದ್ದು, ನಂತರ ತನ್ನ ಜನನಾಂಗವನ್ನು ಕತ್ತರಿಸಿಕೊಂಡಿದ್ದಾನೆ ಎಂದು ಪೊಲೀಸರು ಮತ್ತು ಆಸ್ಪತ್ರೆ ಮೂಲದವರು ತಿಳಿಸಿದೆ.
ಅಂದ ಹಾಗೆ ಘಾಸಿರಾಮ್ಗೆ 18 ವರ್ಷಗಳ ಹಿಂದೆ ವಿವಾಹವಾಗಿದ್ದು, ಮದುವೆಯಾದ ಎಂಟು ವರ್ಷಗಳ ನಂತರ ಆತನ ಪತ್ನಿ ಮಂಜರಿ ದೇವಿ ಜೊತೆ ಲೈಂಗಿಕ ಸಂಬಂಧ ಹೊಂದಲು ನಿರಾಕರಿಸಿದ್ದಾಳೆ. ಈ ದೀರ್ಘ ಲೈಂಗಿಕ ಅಭಾವವು ಆತನನ್ನು ಮಾನಸಿಕವಾಗಿ ಕಿರಿಕಿರಿ ಉಂಟು ಮಾಡಿದೆ ಎಂದು ಘಾಸಿ ರಾಮ್ ಹೇಳಿಕೊಂಡಿದ್ದಾನೆ.
ಆ ರಾತ್ರಿ ಘಾಸಿರಾಮ್ ಕುಡಿದು ಬಂದು, ತನ್ನ ಪತ್ನಿ ಜೊತೆ ಸಂಭೋಗಕ್ಕೆ ಒತ್ತಾಯ ಮಾಡಿದಾಗ, ಮಂಜರಿ ದೇವಿ ನಿರಾಕರಿಸಿದ್ದಾಳೆ. ಇವರಿಬ್ಬರ ನಡುವೆ ಈ ವಿಷಯಕ್ಕೆ ಜಗಳವಾಗಿದೆ. ಕೋಪಗೊಂಡ ಘಾಸಿರಾಮ್ ಅಡುಗೆಮನೆಗೆ ಹೋಗಿ ಹರಿತವಾದ ಚಾಕುವಿನಿಂದ ಜನನಾಂಗವನ್ನು ಕತ್ತರಿಸಿದ್ದಾನೆ. ಅತಿಯಾದ ರಕ್ತಸ್ರಾವದಿಂದ ನೆಲದ ಮೇಲೆ ಕುಸಿದು ಬಿದ್ದಿದ್ದಾನೆ.
ಈತನ ಕಿರುಚಾಟ ಕೇಳಿ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿದ್ದು, ಅವರ ಸಹಾಯದಿಂದ ಮಂಜರಿ ದೇವಿ ಗಾಯಗೊಂಡಿದ್ದ ತನ್ನ ಪತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲಿ ಪ್ರಥಮ ಚಿಕಿತ್ಸೆಯ ನಂತರ, ವೈದ್ಯರು ಶಸ್ತ್ರಚಿಕಿತ್ಸೆಯ ಮೂಲಕ ಕತ್ತರಿಸಿದ ಜನನಾಂಗಗಳನ್ನು ಮತ್ತೆ ಜೋಡಿಸಲು ಪ್ರಯತ್ನ ಮಾಡಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಆದರೆ ಭವಿಷ್ಯದಲ್ಲಿ ಇವರು ಸಾಮಾನ್ಯ ಜೀವನ ನಡೆಸಲು ಮತ್ತು ಮಕ್ಕಳನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.
ಈ ಘಟನೆಯನ್ನು ಆತ್ಮಹತ್ಯೆಗೆ ಯತ್ನಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವೈವಾಹಿಕ ವಿವಾದ ಮತ್ತು ಮಾನಸಿಕ ಆರೋಗ್ಯದ ಅಂಶಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇನ್ನೂ ಯಾವುದೇ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿಲ್ಲ.













