Kodi Shri: ದಸರಾ ಸಮಯದಲ್ಲಿ ಕೋಡಿಮಠದ ಶ್ರೀಗಳಿಂದ ಶಾಕಿಂಗ್ ಭವಿಷ್ಯ!!

Share the Article

Kodi Shri: ಅರಸೀಕೆರೆ ತಾಲೂಕಿನ ಕೋಡಿಮಠದ ಶ್ರೀಗಳು ರಾಜಕೀಯ ಹಾಗೂ ಇತರ ವಿದ್ಯಮಾನಗಳ ಕುರಿತು ಭವಿಷ್ಯ ನುಡಿಯುವುದರಲ್ಲಿ ಖ್ಯಾತಿಯನ್ನು ಗಳಿಸಿದ್ದಾರೆ. ಇದೀಗ ಅವರು ದಸರಾ ಸಮಯದಲ್ಲಿ ಅಚ್ಚರಿ ಭವಿಷ್ಯ ನುಡಿದ್ದಾರೆ.

ಹೌದು, ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದು, ದಸರಾ ಹಬ್ಬದ ಹಿನ್ನೆಲೆಯಲ್ಲಿ ಜಂಬೂ ಸವಾರಿಗೆ ಚಾಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುವಾಗ ಈ ಹಿಂದೆ ತಾವು ಭವಿಷ್ಯ ನುಡಿದಂತೆ ಬಯಲುಸೀಮೆಯಲ್ಲಿ ಮಳೆಯಾಗಿದೆ ಎಂದರು. ‘ನಾನು ಈ ಬಗ್ಗೆ ಹಿಂದೆಯೇ ಹೇಳಿದ್ದೇನೆ. ಬಯಲು ಸೀಮೆ ಮಲೆನಾಡು ಮಳೆ ಎಂದು ಹೇಳಿದ್ದೆ. ಮಲೆನಾಡು ಬಯಲು ಸೀಮೆ ಆಗುತ್ತೆ ಎಂದಿದ್ದೆ. ನಮ್ಮಲ್ಲೀಗ ಬಯಲು ಸೀಮೆ ಮಲೆನಾಡು ಆಗಿದೆ ಎಂದರು.

ಇದನ್ನೂ ಓದಿ:Bombay High Court : ಇನ್ಮುಂದೆ ಅತ್ಯಾಚಾರ ಸಂತ್ರಸ್ತೆಯನ್ನು ಮದುವೆಯಾದ್ರೆ ರದ್ದಾಗಲ್ಲ ಪೋಕ್ಸೋ ಕೇಸ್!!

ಅಲ್ಲದೆ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳ ಬಗ್ಗೆಯೂ ಭವಿಷ್ಯ ನುಡಿದ ಶ್ರೀಗಳು, ಸಿದ್ಧರಾಮಯ್ಯ ಸರ್ಕಾರಕ್ಕೆ ಸಂಕ್ರಾಂತಿಯವರೆಗೆ ಯಾವುದೇ ತೊಂದರೆ ಇಲ್ಲ, ಭಯವಿಲ್ಲ. ಉಳಿದದ್ದನ್ನು ಸಂಕ್ರಾಂತಿಯ ನಂತರ ನೋಡಿ ಹೇಳಬೇಕು ಎಂದರು.

Comments are closed.