Belthangady: ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಅವಮಾನ, 13 ಖಾತೆಗಳ ವಿರುದ್ಧ ಎಫ್‌ಐಆರ್‌

Share the Article

Mangalore: ಮಂಗಳೂರು: ಸೌಜನ್ಯ ತಾಯಿ ಕುಸುಮಾವತಿ ವಿರುದ್ಧ ಅವಹೇಳನಕಾರಿ ಪೋಸ್ಟ್‌ ವಿಚಾರವಾಗಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.

ಸೌಜನ್ಯ ತಾಯಿ ಕುಸುಮಾವತಿ, ಅವರ ಪರ ಹೋರಾಟಗಾರರ ವಿರುದ್ಧ ಸಾಮಾಜಿಕ ಜಾಲಾತಾಣಗಳಲ್ಲಿ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಿರುವ ಆರೋಪ ಕೇಳಿ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Luck: ಯುವಕನಿಗೆ ಅದೆಂಥಾ ಲಕ್ ನೋಡಿ! ಸೆಕೆಂಡ್ ಹ್ಯಾಂಡ್ ಕೋಟ್​​ ಜೇಬಿನಲ್ಲಿ​ ಸಿಕ್ಕಿದ್ದೇನು ಗೊತ್ತಾ?

ಶುಭಾ ರೈ, ಯಶವಂತ ಶೆಟ್ಟಿ, ದೀಪಕ್‌ ಶೆಟ್ಟಿ, ಸರಸ್ವತಿ ಅಮಿತ್‌, ಅಮಿತ್‌ ಬಜ್ಪೆ, ಅನುಶೆಟ್ಟಿ, ನವೀನ್‌ ಗೌಡ್ರು, ಜೈ ಕುಂಜಪ, ಐ.ಎಂ.ಅಡ್ಮಿನ್‌, ಟ್ರೋಲ್‌ ಬಾಹುಬಲಿ, ರಾಜೇಶ್‌ ನಾಯ್ಕ್‌, ಟ್ರೋಲ್‌ ತಿಮ್ಮ ರೌಡಿ, ಶೆಟ್ಟಿ ತನುಷ್‌ ಎಂಬ ಹೆಸರಿನ ಸಾಮಾಜಿಕ ಜಾಲತಾಣಗಳ ಖಾತೆಗಳ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.

Comments are closed.