Bandipur: ಬಂಡೀಪುರ: ಆನೆ ಜೊತೆ ಸೆಲ್ಸಿ ತೆಗೆಯಲು ದುಸ್ಸಾಹಸ: ಗಾಯಗೊಂಡಿದ್ದ ಆರೋಪಿಗೆ ₹25,000 ದಂಡ!

Share the Article

Bandipur: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆಯೊಂದಿಗೆ ಸೆಲ್ಪಿ ತೆಗೆದುಕೊಳ್ಳಲು ಯತ್ನಿಸಿ. ಆನೆ ದಾಳಿಗೆ ಒಳಗಾಗಿ ಗಾಯಗೊಂಡಿದ್ದ ಆರೋಪಿ ಆ‌ರ್. ಬಸವರಾಜ್‌ನನ್ನು ಸೋಮವಾರ ಅರಣ್ಯ ಇಲಾಖೆ ಅಧಿಕಾರಿಗಳು ನಂಜನಗೂಡಿನ ನಿವಾಸದಿಂದ ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದು ಆತನಿಂದ ₹25,000 ದಂಡ ಮತ್ತು ತಪ್ರೊಪ್ಪಿಗೆ ಪತ್ರ ಪಡೆಯಲಾಗಿದೆ. ಬಂಡೀಪುರ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯ ಪ್ರಕಾರ, ಆರೋಪಿ ತಿಳಿವಳಿಕೆ ಕೊರತೆಯಿಂದ ಈ ಕೃತ್ಯ ಎಸಗಿದ್ದಾಗಿ ತಪ್ರೊಪ್ಪಿಕೊಂಡಿದ್ದಾರೆ. ವಿಚಾರಣೆಯ ಬಳಿಕ ಆರೋಪಿಯಿಂದ ತಪ್ರೊಪ್ಪಿಗೆ ವಿಡಿಯೊ ಪಡೆಯಲಾಗಿದೆ.

BPL Card: ರಾಜ್ಯದಲ್ಲಿ 12.69 ಲಕ್ಷ ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆ: ಅನರ್ಹರ ಪಡಿತರ ಚೀಟಿ ರದ್ದು!

Comments are closed.