Viajyapura: ಸಾಲ ಮರುಪಾವತಿ ಮಾಡದ ಕಾರಣ ವ್ಯಕ್ತಿಯನ್ನೇ ಒತ್ತೆಯಾಳಾಗಿ ಇಟ್ಟುಕೊಂಡ ಸಾಲದಾತ

Vijayapura: ಸಾಲ ನೀಡಿರುವ ವ್ಯಕ್ತಿ ಒಬ್ಬ ಆ ಹಣಕ್ಕಾಗಿ ಒಬ್ಬ ವ್ಯಕ್ತಿಯನ್ನೇ ಅಡವಿಟ್ಟುಕೊಂಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ಸಾಲ ಪಡೆದು ಹಣ ಮರುಪಾವತಿ ಮಾಡದ ಕಾರಣ 27 ದಿನಗಳಿಂದ ವ್ಯಕ್ತಿ ಒಬ್ಬರನ್ನೇ ಅಡ ಇಟ್ಟುಕೊಂಡಿದ್ದು, ದೇವರ ಹಿಪ್ಪರಗಿ ತಾಲೂಕಿನ ಉದಯ್ ಕುಮಾರ್ ಬಾವಿ ಮನಿ ಎಂಬುವವರನ್ನು ಬಸವನಬಾಗೆವಾಡಿಯ ಪ್ರಭಾಕರ್ ಡವಳಗಿ ಎಂಬುವವರು ಒತ್ತೆಯಳಾಗಿ ಇಟ್ಟುಕೊಂಡಿದ್ದಾರೆ.
ಈ ಇಬ್ಬರೂ ಕೂಡ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿದ್ದು ಈಗ ನಿವೃತ್ತಿ ಹೊಂದಿದ್ದಾರೆ, ಇನ್ನು ಉದಯಕುಮಾರ್ 31.5 0 ಲಕ್ಷ ಸಾಲ ಪಡೆದಿರುವುದಾಗಿ ಪ್ರಭಾಕರ್ ಹೇಳಿದ್ದು, ಗೋವಾಗಿ ಕರೆದು ಇದು ಒತ್ತೆಯಳಾಗಿ ಇಟ್ಟುಕೊಂಡಿರುತ್ತಾರೆ. ಹಾಗೂ ಈ ಸಾಲದ ಕುರಿತಾಗಿ ಕುಟುಂಬಸ್ಥರಿಗೆ ತಿಳಿಯದೆ ಕುಟುಂಬಸ್ಥರು ಕಂಗಲಾಗಿದ್ದಾರೆ.
ಸದ್ಯ ಈ ಪ್ರಕರಣ ಎಸ್ ಪಿ ಲಕ್ಷ್ಮಣ ನಿಂಬಾಳ್ಕರ್ ಅವರ ಗಮನಕ್ಕೆ ಬಂದಿದ್ದು ಕುಟುಂಬದವರು ದೂರು ನೀಡಿದರೆ, ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ;Weather Report: ಕರ್ನಾಟಕದ ಹವಾಮಾನ ಮುನ್ಸೂಚನೆ ಹೇಗಿದೆ? ಮಳೆರಾಯ ಕೊಂಚ ಬಿಡುವು ಕೊಡ್ತಾನಾ?
Comments are closed.