Karnataka mango: ರಾಜ್ಯದ ಮಾವು ಬೆಳೆಗಾರರಿಗೆ ನೆರವಾಗಲು ಮುಂದಾದ ಕೇಂದ್ರ ಸರ್ಕಾರ!

Share the Article

Karnataka mango: ಕರ್ನಾಟಕದ ಮಾವು (Karnataka mango) ಬೆಳೆಗಾರರ ರಕ್ಷಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ 2.5 ಲಕ್ಷ ಟನ್‌ ಮಾವು ಖರೀದಿಗೆ ಅಸ್ತು ಎಂದಿದೆ.

ಕೃಷಿ ಸಚಿವ ಎನ್‌. ಚಲುವರಾಯ ಸ್ವಾಮಿ ಅವರೊಂದಿಗೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ನಡೆಸಿದ ವಿಡಿಯೋ ಕಾನ್ಸರೆನ್ಸ್ ಸಂವಾದದ ಬಳಿಕ ರಾಜ್ಯದ ಮಾವು ಬೆಳೆಗಾರರಿಗೆ ನೆರವಾಗಲು ಕೇಂದ್ರ ಸರ್ಕಾರ ಮುಂದಾಗಿರುವುದಾಗಿದೆ.

ಈ ಸಂಬಂಧ ಅಧಿಕೃತ ಆದೇಶ ಇನ್ನಷ್ಟೇ ಬರಬೇಕಿದೆ. ಈ ಸಂವಾದದಲ್ಲಿ ರಾಜ್ಯದಲ್ಲಿ ಉತ್ಪತ್ತಿಯಾಗುವ 10 ಲಕ್ಷ ಮೆಟ್ರಿಕ್ ಟನ್ ಮಾವುಗಳಲ್ಲಿ 2.5 ಲಕ್ಷ ಟನ್ ಗಳ ವರೆಗೆ ಪರಿಹಾರ ನೀಡುವ ಬಗ್ಗೆ ಚರ್ಚೆ ನಡೆದಿದೆ.

ಇದನ್ನೂ ಓದಿ:PM Modi: ಪ್ರಧಾನಿ ನಿವಾಸದಲ್ಲಿ ನಿಮ್ಮ ಪತ್ನಿ ಏಕಿಲ್ಲ, ಸಿಂಧೂರ್ ಹಾಕಿದ ನಿಮ್ಮ ಪತ್ನಿಗೆ ಏನು ಮಾಡಿದ್ರಿ- ಮೋದಿ ವಿರುದ್ಧ ಅವಿಮುಕ್ತೇಶ್ವರಾನಂದ ಸ್ವಾಮೀಜಿ ವಾಗ್ದಾಳಿ!!

Comments are closed.