Jameer Ahammad : ದೇಶಕ್ಕಾಗಿ ಬಲಿಯಾಗಲು 100% ಸಿದ್ದ – ಸಚಿವ ಜಮೀರ್

Share the Article

Jameer Ahammad: ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನಕ್ಕೆ ಭಾರತ ಸರ್ಕಾರವು ಒಂದಲ್ಲ ಒಂದು ರೀತಿಯ ಶಾಕ್ ನೀಡುತ್ತಲೇ ಬಂದಿದೆ. ಮುಂದೆಯೂ ಅನೇಕ ಮಾಸ್ಟರ್ ಸ್ಟ್ರೋಕ್ ಗಳನ್ನು ನೀಡಲು ಭಾರತ ಸಜ್ಜಾಗಿತ್ತಿರುವ ಹೊತ್ತಿನಲ್ಲಿ ಕರ್ನಾಟಕದ ಸಚಿವ ಜಮೀರ್ ಅಹಮದ್ ಖಾನ್ ಅವರು ನನಗೆ ಆತ್ಮಾಹುತಿ ಬಾಂಬ್ ಕೊಡಿ, ನಾನು ಅದನ್ನು ಕಟ್ಟಿಕೊಂಡು ಪಾಕಿಸ್ತಾನಕ್ಕೆ ಹೋಗುತ್ತೇನೆ ಎಂದು ಹೇಳಿಕೆ ನೀಡಿ ರಾಜ್ಯಾದ್ಯಂತ ಸುದ್ದಿಯಾಗಿದ್ದರು. ಈ ಕುರಿತಾಗಿ ಅವರ ಪಕ್ಷದ ಶಾಸಕರು, ಸಚಿವರೆ ಕುಹಕವಾಡಿದ್ದರು. ಆದರೆ ಜಮೀರ್ ಅವರು ಮತ್ತೆ ಈ ಮಾತನ್ನು ಪುನಃರುಚ್ಚರಿಸಿದ್ದಾರೆ.

ಹೌದು, ಕರ್ನಾಟಕ ವಸತಿ ಮತ್ತು ಅಲ್ಪಸಂಖ್ಯಾತರ ಸಚಿವ ಬಿ.ಜೆ.ಜಮೀರ್ ಅಹ್ಮದ್ ಖಾನ್ ಅವರು ನೂರಕ್ಕೆ ನೂರರಷ್ಟು ದೇಶಕ್ಕೋಸ್ಕರ ಬಲಿಯಾಗಲು ಸಿದ್ಧನಿದ್ದೇನೆ, ಭಾರತ ಯುದ್ದ ಮಾಡುವುದಿದ್ದರೆ ನನಗೆ ಅವಕಾಶ ಕೊಡಲಿ, ನಾನು ಸುಸೈಡ್ ಬಾಂಬ್ ಕಟ್ಟಿಕೊಂಡು ಹೋಗುತ್ತೇನೆ ಎಂದು ಪುನರುಚ್ಚರಿಸಿದ್ದಾರೆ.

ಅಲ್ಲದೆ ನನಗೆ ನನಗೆ ದೇಶ ಮುಖ್ಯ. ನೂರಕ್ಕೆ ನೂರರಷ್ಟು ಹೋಗಲು ಸಿದ್ದನಿದ್ದೇನೆ. ದೇಶಕ್ಕಾಗಿ ಬಲಿಯಾಗಲೂ ನಾನು ಸಿದ್ದನಿದ್ದೇನೆ. ಯುದ್ಧದ ವಿಚಾರದಲ್ಲಿ ಕೇಂದ್ರ ಸರಕಾರ ಏನು ತೀರ್ಮಾನ ಕೈಗೊಳ್ಳುತ್ತದೆಯೋ ತಗೊಳ್ಳಲಿ. ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ. ನೀವು ಏನಾದರೂ ತೀರ್ಮಾನ ಕೈಗೊಳ್ಳಿ ಎಂಬುದಾಗಿ ಹೇಳಲಾಗಿದೆ ಎಂದು ಹೇಳಿದರು.

Comments are closed.