Raichur: ಕೆಕೆಆರ್‌ಟಿಸಿ ಬಸ್‌ನಲ್ಲಿ ಮಹಿಳೆಗೆ ಹೆರಿಗೆ!

Share the Article

KKRTC: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್‌ ಬಳಿ ಕೆಕೆಆರ್‌ಟಿಸಿ ಬಸ್‌ನಲ್ಲಿ ಗರ್ಭಿಣಿಯೊಬ್ಬರು ಮಗುವಿನಗೆ ಜನ್ಮ ನೀಡಿದ ಘಟನೆ ನಡೆದಿದೆ.

ಯಾದಗಿರಿಯ ಸುರಪುರ ತಾಲೂಕಿನ ಹೊಂಬಳಕಲ್‌ ಗ್ರಾಮದ ಶಾಂಭವಿ ಎನ್ನುವ ಮಹಿಳೆ ಬಸ್‌ನಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ.

ಕೂಲಿ ಕೆಲಸಕ್ಕೆಂದು ಕಾರವಾರಕ್ಕೆ ಹೋಗಿದ್ದ ದಂಪತಿ ವಾಪಾಸ್‌ ತಮ್ಮ ಊರಿಗೆ ಬರುವಾಗ ಬಸ್‌ನಲ್ಲಿಯೇ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಅದೇ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಆಶಾ ಕಾರ್ಯಕರ್ತೆ ಮೇರಿ ಎನ್ನುವವರು ಹೆರಿಗೆ ಮಾಡಿಸಿರುವ ಕುರಿತು ವರದಿಯಾಗಿದೆ.

ನಂತರ ಬಾಣಂತಿಯನ್ನು ಮುದಗಲ್‌ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಯಿತು. ತಾಯಿ ಮತ್ತು ಮಗು ಆರೋಗ್ಯವಾಗಿದೆ.

Comments are closed.