Uppinangady: ಕೆ.ಎಸ್‌.ಆರ್.ಟಿ.ಸಿ. ಬಸ್‌- ಲಾರಿ ಅಪಘಾತ- ಶಾಲಾ ಮಕ್ಕಳ ಸಹಿತ ಆರು ಮಂದಿಗೆ ಗಾಯ!

Uppinangady: ಕೆ.ಎಸ್‌.ಆರ್.ಟಿ.ಸಿ. ಬಸ್‌ ಮತ್ತು ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಶಾಲಾ ಮಕ್ಕಳ ಸಹಿತ ಬಸ್ಸಿನಲ್ಲಿದ್ದ ಆರು ಮಂದಿ ಗಾಯಗೊಂಡ ಘಟನೆ ಉಪ್ಪಿನಂಗಡಿ ಬಳಿ ರಾಷ್ಟ್ರೀಯ ಹೆದ್ದಾರಿಯ ಅಂಡರ್‌ಪಾಸ್‌ ಬಳಿ ನಡೆದಿದೆ.

ಸುಬ್ರಹ್ಮಣ್ಯದಿಂದ ಮಂಗಳೂರಿಗೆ ಹೋಗುತ್ತಿದ್ದ ಬಸ್‌ ತಿರುವು ಪಡೆದು ಬಸ್‌ ನಿಲ್ದಾಣಕ್ಕೆಂದು ಅಂಡರ್‌ಪಾಸ್‌ನಿಂದ ತುಸು ಮುಂದೆ ಹೋಗುತ್ತಿದ್ದಾಗ ಮಂಗಳೂರು ಕಡೆಯಿಂದ ಹಾಸನ ಕಡೆಗೆ ಸರ್ವಿಸ್‌ ರಸ್ತೆ ಮೂಲಕ ಬರುತ್ತಿದ್ದ ಲಾರಿ ಬಸ್ಸಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.

ಬಸ್ಸಿನಲ್ಲಿದ್ದ ಮುದಾಸ್ಸೀರ್‌ (20), ಅಜ್ಮಲ್‌ ಹುಸೇನ್‌ (19), ಕೀರ್ತನ್‌ (20), ಅಫ್ತಾರ್ಖಾನ್‌ (19), ಫಾತಿಮಾ (19), ಉನೈಸ್‌ (19) ಎಂಬುವವರು ಗಾಯಗೊಂಡಿದ್ದು ಉಪ್ಪಿನಂಗಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುರಿತು ವರದಿಯಾಗಿದೆ. ಹಳೆನೇರಂಕಿ ನಿವಾಸಿ ಕೀರ್ತನ್‌ಗೆ ಗಂಭೀರ ಗಾಯವಾಗಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.