Home News Mantralaya: ರಾಘವೇಂದ್ರ ಸ್ವಾಮಿಗಳ ‘ಪರಿಮಳ ಪ್ರಸಾದ’ ತಯಾರಿಕೆಗಿಲ್ಲ ನಂದಿನಿ ತುಪ್ಪ !! ಹಾಗಿದ್ರೆ ರಾಯರ ಪ್ರಸಾದಕ್ಕೆ...

Mantralaya: ರಾಘವೇಂದ್ರ ಸ್ವಾಮಿಗಳ ‘ಪರಿಮಳ ಪ್ರಸಾದ’ ತಯಾರಿಕೆಗಿಲ್ಲ ನಂದಿನಿ ತುಪ್ಪ !! ಹಾಗಿದ್ರೆ ರಾಯರ ಪ್ರಸಾದಕ್ಕೆ ಬಳಸೋ ತುಪ್ಪಾ ಯಾವುದು ? ಶ್ರೀಗಳು ಹೇಳಿದ್ದೇನು?

Hindu neighbor gifts plot of land

Hindu neighbour gifts land to Muslim journalist

Mantralaya: ವಿಶ್ವ ವಿಖ್ಯಾತ ತಿರಪತಿ ತಿಮ್ಮಪ್ಪನ ಲಡ್ಡು(Tirupati Laddu) ಪ್ರಸಾದಕ್ಕೆ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿದ ಆರೋಪ ವಿಚಾರ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಇದು ದೇಶಾದ್ಯಂತ ಇರುವ ಹಲವು ಪ್ರಸಿದ್ಧ ದೇಗುಲಗಳ ಪ್ರಸಾದ ತಯಾರಿಕೆಗೆ ಬಳಸುವ ತುಪ್ಪದ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಹೀಗಾಗಿ ತಮ್ಮ ಕ್ಷೇತ್ರಗಳಲ್ಲಿನ ಪ್ರಸಾದ ತಯಾರಿಕೆಗೆ ತುಪ್ಪ ಎಲ್ಲಿಂದ ಬರುತ್ತದೆ ಎಂದು ಧಾರ್ಮಿಕ ಮುಖಂಡರು, ಸ್ವಾಮಿಜಿಗಳು ಸ್ಪಷ್ಟೀಕರಣ ನೀಡುತ್ತಿದ್ದಾರೆ.

ದೇಶದ ಮತ್ತೊಂದು ಪ್ರಮುಖ ಧಾರ್ಮಿಕ ಕ್ಷೇತ್ರವಾದ ಮಂತ್ರಾಲಯ(Mantralaya) ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪರಿಮಳ ಪ್ರಸಾದಕ್ಕೂ ಅಷ್ಟೇ ಪ್ರಾಮುಖ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮಂತ್ರಾಲಯದ ಪರಿಮಳ ಪ್ರಸಾದಕ್ಕೆ ತುಪ್ಪ ಎಲ್ಲಿಂದ ಬರುತ್ತದೆ ಎಂದು ಮಂತ್ರಾಲಯದ ಶ್ರೀಗಳು ಸ್ಪಷ್ಟೀಕರಣ ನೀಡಿದ್ದಾರೆ.

ಹೌದು, ಮಂತ್ರಾಲಯದ (Mantralaya) ರಾಘವೇಂದ್ರ ಸ್ವಾಮಿ ಮಠದಲ್ಲಿ (Raghavendra Swamy Mutt) ಬಳಸುವ ತುಪ್ಪದ (Ghee) ಬಗ್ಗೆ ಮಂತ್ರಾಲಯ ಮಠಾಧೀಶ ಶ್ರೀ ಸುಭುದೇಂದ್ರ ತೀರ್ಥ ಶ್ರೀಗಳೇ (Subudhendra Teertha Swamiji) ಸ್ಪಷ್ಟನೆ ನೀಡಿದ್ದು, ರಾಘವೇಂದ್ರ ಸ್ವಾಮಿಗಳ ಪರಿಮಳ ಪ್ರಸಾದಕ್ಕೆ (Parimala Prasada) ಆಂಧ್ರದ ಕರ್ನೂಲ್ ಜಿಲ್ಲೆಯ ವಿಜಯಾ ಡೈರಿಯಿಂದ ತರಿಸ್ತೇವೆ ಎಂದು ಹೇಳಿದ್ದಾರೆ.

ಅಲ್ಲದೆ ಕೊರೊನಾಗೂ ಮುಂಚೆ ನಂದಿನಿ ಡೈರಿಯಿಂದಲೇ ತುಪ್ಪ ತರಿಸುತ್ತಿದ್ದೆವು. ಆದರೆ ಎರಡೂ ರಾಜ್ಯಗಳಿಗೆ ಸಪ್ಲೈ ಮಾಡಲು ಕಷ್ಟಕರವಾಗಿತ್ತು. ಹೀಗಾಗಿ ಕರ್ನೂಲು ಜಿಲ್ಲೆಯ ವಿಜಯಾ ಡೈರಿಯಿಂದ ತುಪ್ಪ ತರಿಸ್ತೇವೆ. ಅದು ಕೂಡ ಪರಿಶುದ್ಧವಾಗಿದೆ. ತಿರುಪತಿ ಘಟನೆ ಬಳಿಕ ಡೈರಿ‌ ಮಾಲೀಕರಿಂದ ಲ್ಯಾಬ್ ರಿಪೋರ್ಟ್ ‌ಕೂಡ ಪಡೆದಿದ್ದೇವೆ ಅಂತ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.